Site icon Suddi Belthangady

ಧರ್ಮಸ್ಥಳ: ಬಸದಿಯಲ್ಲಿ ನೋಂಪಿ ಉದ್ಯಾಪನಾ ಸಮಾರಂಭ

ಧರ್ಮಸ್ಥಳ: ಅಳದಂಗಡಿಯ ಗುಣವಂತನಿಲಯದ ಶಾಂತಲಾಮಿತ್ರಸೇನ ಜೈನ್, ಧರ್ಮಸ್ಥಳದ ಅರುಣಾವೀರು ಶೆಟ್ಟಿ ಮತ್ತು ಸೌಮ್ಯಸುಭಾಶ್ ಅವರು ಶುಕ್ರವಾರನೋಂಪಿ ಉದ್ಯಾಪನಾ ಸಮಾರಂಭ ಜು.19ರಂದು ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನಡೆಯಿತು.

ಪುರೋಹಿತರಾದ ಶಿಶಿರ ಇಂದ್ರ, ಶ್ರೀಕೀರ್ತಿ, ಶ್ರೀಪಾಲ ಮತ್ತು ಪಾರ್ಶ್ವನಾಥ ಪೂಜಾ ವಿಧಿ-ವಿಧಾನಗಳಲ್ಲಿ ಸಹಕರಿಸಿದರು.ಸೌಮ್ಯಸುಭಾಶ್ ಮತ್ತು ಶಿಶಿರ ಇಂದ್ರರ ಪೂಜಾ ಮಂತ್ರಪಠಣ ಹಾಗೂ ಸುಶ್ರಾವ್ಯ ಜಿನಭಕ್ತಿಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.

ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಸೋನಿಯಾವರ್ಮ ಉಪಸ್ಥಿತರಿದ್ದರು.

“ನಂದೀಶ್ವರ ಭಕ್ತಿ ಹಾಗೂ ಉದ್ಯಾಪನಾ ಪೂಜಾವಿಧಾನ” ಎಂಬ ಕೃತಿಯನ್ನು ಶಾಸ್ತ್ರದಾನವಾಗಿ ಎಲ್ಲರಿಗೂ ವಿತರಿಸಲಾಯಿತು.ಅಳದಂಗಡಿಯ ಮಿತ್ರಸೇನ ಜೈನ್, ಧರ್ಮಸ್ಥಳದ ವೀರು ಶೆಟ್ಟಿ ಮತ್ತು ಸುಭಾಷ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.

Exit mobile version