Site icon Suddi Belthangady

ಇತ್ತೀಚೆಗೆ ನಿಧನರಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಸತೀಶ್ ಶೆಟ್ಟಿ ಕುರ್ಡುಮೆರವರ ನಿವಾಸಕ್ಕೆ ಮಾಜಿ ವಿ.ಪ ಸದಸ್ಯ ಹರೀಶ್ ಕುಮಾರ್ ಭೇಟಿ

ಮಡಂತ್ಯಾರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷರು, ಮಡಂತ್ಯಾರು ಗ್ರಾಮ ಪಂಚಾಯತಿಯ ಮಾಜಿ ಸದಸ್ಯರು, ಜೈ ಹನುಮಾನ್ ಭಜನಾ ಮಂಡಳಿ ಮಂಜಲ್ ಪಲ್ಕೆ ಇದರ ಸ್ಥಾಪಕ ಅಧ್ಯಕ್ಷ
ಸತೀಶ್ ಶೆಟ್ಟಿ ಕುರ್ಡುಮೆ ರವರು ಜು.08ರಂದು ದೈವಾಧೀನರಾಗಿದ್ದು, ಇವರ ಮನೆಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು/ಮಾಜಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.

Exit mobile version