Site icon Suddi Belthangady

ಉಜಿರೆ: ಗಾಂಧಿನಗರದ ವಿಜಯ ಬ್ಯಾಂಕ್ ನಿವೃತ್ತ ಪಿಗ್ಮಿ ಸಂಗ್ರಾಹಕ ಬ್ಯಾಪ್ಟಿಟ್ ಸೆರಾವೋ ನಿಧನ

ಉಜಿರೆ: ಉಜಿರೆ ಗಾಂಧಿನಗರದ ವಿಜಯ ಬ್ಯಾಂಕ್ ನಿವೃತ್ತ ಪಿಗ್ಮಿ ಸಂಗ್ರಾಹಕ ಬ್ಯಾಪ್ಟಿಸ್ಟ್ ಸೆರಾವೋ (72 ವ) ಅಸೌಖ್ಯದಿಂದ ಜು.19ರಂದು ನಿಧನರಾದರು.

ಮೃತರು ಹಲವಾರು ವರ್ಷಗಳ ಕಾಲ ಉಜಿರೆ, ಬೆಳ್ತಂಗಡಿಯಲ್ಲಿ ವಿಜಯ ಬ್ಯಾಂಕ್ ಪಿಗ್ಮಿ ಸಂಗ್ರಾಹಕರಾಗಿ ಜನಾನುರಾಗಿಯಾಗಿದ್ದರು.

ಉಜಿರೆ ಅನುಗ್ರಹ ಶಾಲೆ ಪ್ರಾರಂಭಿಸುವ ಸಂದರ್ಭದಲ್ಲಿ ಬಹಳಷ್ಟು ಸಹಕಾರ ನೀಡಿದ್ದರು. ಪತ್ನಿ ಅನುಗ್ರಹ ಶಾಲಾ ನಿವೃತ್ತ ಶಿಕ್ಷಕಿ ರೆಜಿನಾ ಸೆರಾವೋ, ಪುತ್ರ, ಪುತ್ರಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Exit mobile version