Site icon Suddi Belthangady

ಲೋಕೋಪಯೋಗಿ ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷ ವಿನಯ್ ಹೆಗ್ಡೆ ನಾರಾವಿ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯದರ್ಶಿ ದಯಾನಂದ ಸಂಜಯನಗರ ಸ್ವಾಗತಿಸಿ, ಸಂಘದ ಖರ್ಚು ವೆಚ್ಚ ಮಂಡಿಸಿದರು.ಸಂಘದ ಗೌರವಾಧ್ಯಕ್ಷರಾಗಿ ಗಿರಿರಾಜ್ ಬಾರಿತ್ತಾಯ, ಅಧ್ಯಕ್ಷರಾಗಿ ವಿನಯ್ ಹೆಗ್ಡೆ ನಾರಾವಿ ಮತ್ತು ಕಾರ್ಯದರ್ಶಿಯಾಗಿ ದಯಾನಂದ್ ಸಂಜಯನಗರ ಇವರನ್ನು ಮುಂದುವರಿಸಲು ತೀರ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷರಾಗಿ ಗಣೇಶ್ ಕಾಣಾಲ್, ರಫೀಕ್ ಬಾಂಬಿಲ, ಕೋಶಾಧಿಕಾರಿಯಾಗಿ ಜಯಕುಮಾರ್ ಕಲ್ಲಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ರೋಹಿತ್ ಧರ್ಮಸ್ಥಳ ಅವಿರೋಧವಾಗಿ ಆಯ್ಕೆಯಾದರು. ವಸಂತ್ ಮಜಲ್, ಮಂಜುನಾಥ್ ಕಾಮತ್, ಜನಾರ್ದನ ಗೌಡ, ವಿಶ್ವನಾಥ್ ಲಾಯಿಲ, ರಾಜಪ್ರಕಾಶ್ ಪಡ್ಡಾಯಿ ಸಂಘದ ಸಲಹೆಗಾರರಾಗಿ, ಕಾರ್ಯಕಾರಿಣಿ ಸದಸ್ಯರಾಗಿ ನವಾಝ್, ಅಧಿಷ್ ಕಾಮತ್, ರಾಘವೇಂದ್ರ, ಮನೋಜ್, ದಿಶಾಂತ್ ಮಿತ್ತಮಾರ್, ಸುಜಿತ್ ಚಂದ್ರಪಾಲ್, ಗಣೇಶ್ ಲಾಯಿಲ, ಧನಂಜಯ್ ರಾವ್, ನಝೀರ್ ಶಕ್ತಿನಗರ, ರವಿ ಗುಂಪಲಾಜೆ, ಸಹದೇವ್ ಉಜಿರೆ ಆಯ್ಕೆಯಾದರು.

ಮಾಜಿ ಶಾಸಕ ದಿ.ವಸಂತ ಬಂಗೇರರಿಗೆ ನುಡಿನಮನ ಸಲ್ಲಿಸಲಾಯಿತು. ಬೆಳ್ತಂಗಡಿ ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗ ಕಾರ್ಯನಿರ್ವಾಹಕ ನಿತಿನ್ ಕುಮಾರ್ ಉಪಸ್ಥಿತರಿದ್ದರು.

Exit mobile version