Site icon Suddi Belthangady

ಅಳದಂಗಡಿ: ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನಕ್ಕೆ ದೈವದ ಆಸನ(ಮುಕ್ಕಾರ್)ದ ಸಮರ್ಪಣೆ- ವಾಸ್ತುಶಿಲ್ಪಿ ಸುಂದರ ಆಚಾರ್ಯರಿಗೆ ಕ್ಷೇತ್ರದ ವತಿಯಿಂದ ಗೌರವಾರ್ಪಣೆ

ಅಳದಂಗಡಿ: ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನಕ್ಕೆ ದೈವದ ಆಸನ(ಮುಕ್ಕಾರ್)ವನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದ ವಾಸ್ತುಶಿಲ್ಪಿ ಸುಂದರ ಆಚಾರ್ಯ ಮಡೆಂಜಿಮಾರು ರವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಗೌರವಾರ್ಪಣೆಯನ್ನು ಅಳದಂಗಡಿ ಅರಮನೆಯ ಗೌರವಾನ್ವಿತ ಅರಸ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲರವರು, ಕ್ಷೇತ್ರ ಆಡಳಿತ ಮೊಕ್ತೇಸರರಾದ ಶ್ರೀ ಶಿವಪ್ರಸಾದ ಅಜಿಲರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀರಂಗ ಮಯ್ಯ, ಸೋಮನಾಥ ಬಂಗೇರ ವರ್ಪಾಳೆ, ಹರೀಶ್ ಆಚಾರ್ಯ, ಮಂಜುನಾಥ ಆಚಾರ್ಯ, ಆನಂದ ಆಚಾರ್ಯ, ಹರೀಶ್ ಕುಲಾಲ್, ಆನಂದ ಪೂಜಾರಿ ಬರಾಯ ಹಾಗೂ ಕ್ಷೇತ್ರ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Exit mobile version