Site icon Suddi Belthangady

ಪೆರೋಡಿತ್ತಾಯ ಕಟ್ಟೆ: ಬಸ್ಸು ತಂಗುದಾಣ ಕುಸಿತ

ತೆಂಕಕಾರಂದೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪೆರೋಡಿತ್ತಾಯ ಕಟ್ಟೆಯ ಕೇಂದ್ರ ಭಾಗದಲ್ಲಿರುವ ಮಿತ್ರ ಯುವಕ ಮಂಡಲ ತೆಂಕಕಾರಂದೂರು ಇವರ ವತಿಯಿಂದ ನಿರ್ಮಿಸಲ್ಪಿಟ್ಟಿದ್ದ ಕಟ್ಟೆಯ ಬಸ್ಸು ತಂಗುದಾಣ ಸಂಪೂರ್ಣವಾಗಿ ಕುಸಿದಿದೆ.

ಈ ತಂಗುದಾಣವು ಸಾರ್ವಜನಿಕರಿಗೆ, ಬಸ್ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತಂಗಲು ಅತ್ಯಂತ ಉಪಯೋಗಕಾರಿಯಾಗುತ್ತಿದ್ದು ಇದೀಗ ಅಕ್ಕ ಪಕ್ಕದ ಅಂಗಡಿಗಳ ಎದುರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದಷ್ಟು ಬೇಗ ಈ ಬಸ್ ತಂಗುದಾಣ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.

Exit mobile version