Site icon Suddi Belthangady

ದನದ ಕರುವಿನ ಶವ ಮೋರಿಯಲ್ಲಿ ಪತ್ತೆ: ಅಂತ್ಯ ಸಂಸ್ಕಾರ ನೆರವೇರಿಸಿದ ಕೊಕ್ಕಡ ಶಿವಾಜಿ ಗ್ರೂಪ್ ಆಫ್ ಬಾಯ್ಸ್

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕದಿಂದ ಪಟ್ಟೂರಿಗೆ ಹೋಗುವ ರಸ್ತೆಯ ಬಳಿ ಇರುವ ಮೋರಿಯಲ್ಲಿ ದನದ ಕರುವೊಂದು ಸತ್ತು ಬಿದ್ದಿದ್ದು, ಮೋರಿಯಿಂದ ತೆಗೆದು ಅದರ ಅಂತ್ಯ ಸಂಸ್ಕಾರವನ್ನು ಕೊಕ್ಕಡದ ಹಿಂದೂ ಜಾಗರಣ ವೇದಿಕೆಯ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ತಂಡದ ಸದಸ್ಯರು ಮಾಡಿದರು.

ಕರು ಸತ್ತು ಮೂರು ದಿನಗಳಾಗಿರಬಹುದು ಎಂದು ಹೇಳಲಾಗುತ್ತಿದ್ದು, ಕರು ಆಕಸ್ಮಿಕವಾಗಿ ಸತ್ತಿಲ್ಲ, ಉದ್ದೇಶಪೂರಿತವಾಗಿಯೇ ಸಾಯಿಸಿರಬಹುದು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಹಿಂದೆ ಈ ಭಾಗದಲ್ಲಿ ಅನೇಕ ಬಾರಿ ದನಗಳನ್ನು ಕಳವು ಮಾಡಲಾಗಿದ್ದು, ಯಾವ ಅಧಿಕಾರಿಗಳು ಕೂಡ ಈ ಬಗ್ಗೆ ಶಿಸ್ತು ಕ್ರಮ ಕೈಗೊಂಡಿಲ್ಲ. ಕರು ಸತ್ತು ಬಿದ್ದಿದ್ದ ಪ್ರದೇಶಕ್ಕೆ ಸಮೀಪದಲ್ಲಿ ಕಸಾಯಿ ಖಾನೆಯೊಂದಿದ್ದು, ಅಲ್ಲಿಗೆ ತಂದಿರುವ ಕರು ಸತ್ತಿರುವ ಕಾರಣ ಮೋರಿಯಲ್ಲಿ ಬಿಸಾಡಿರಬಹುದೇ ಎಂದು ಚರ್ಚೆಯಾಗುತ್ತಿದೆ.

ಮೋರಿಗೆ ಬಿಸಾಡಿರುವ ಬಗ್ಗೆ ಕೊಕ್ಕಡ ಪಿಡಿಓರವರು ಹಿಂದೂ ಜಾಗರಣ ವೇದಿಕೆ ಕೊಕ್ಕಡ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು.

Exit mobile version