Site icon Suddi Belthangady

ಚಾರ್ಮಾಡಿ: ತೀವ್ರ ಗಾಳಿ ಮಳೆಗೆ ಆಡಿಮಾರು ಎಂಬಲ್ಲಿ ಮನೆಗೆ ಬಿದ್ದ ಬೃಹತ್ ಗಾತ್ರದ ಮರ- ನೆರಿಯ ಶೌರ್ಯ ವಿಪತ್ತು ಘಟಕ ತಂಡದಿಂದ ತೆರವು ಕಾರ್ಯಾಚರಣೆ

ಚಾರ್ಮಾಡಿ: ಜು.13ರಂದು ರಾತ್ರಿ ಸುರಿದ ತೀವ್ರ ಗಾಳಿ ಮಳೆಗೆ ಚಾರ್ಮಾಡಿ ಗ್ರಾಮದ ಆಡಿಮಾರು ಇಂದಿರಾ ಮೋಹನ್ ಇವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದಿದ್ದು, ನೆರಿಯ ತುರ್ತು ಸ್ವಂದನ( ಶೌರ್ಯವಿಪತ್ತು) ಘಟಕದ ಸದಸ್ಯರ ಮೂಲಕ ತಿಳಿದು, ನೆರಿಯ, ಅರಸಿನಮಕ್ಕಿ, ಉಜಿರೆ, ಬೆಳಾಲು ಶೌರ್ಯ ಘಟಕದ ಸ್ವಯಂ ಸೇವಕರು ಸ್ಥಳಕ್ಕೆ ತೆರಳಿ ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದರು.

ಘಟನಾ ಸ್ಥಳಕ್ಕೆ ಅರಣ್ಯಧಿಕಾರಿ DRF ನಾಗೇಶ್, ಗೋಪಾಲ್, ರವಿ ಅವರೊಂದಿಗೆ ಚರ್ಚಿಸಿ ಮನೆಗೆ ಬಿದ್ದ ಮರ ತೆರವುಗೊಳಿಸಲಾಯಿತು ಹಾಗೂ ಚಾರ್ಮಾಡಿ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಮನೆಗೆ ಸಿಮೆಂಟ್ ಶೀಟ್ ಹಾಗೂ ಸಿಮೆಂಟ್ ಕಂಬ ಒದಗಿಸಿ ಕೊಟ್ಟರು.ತುರ್ತು ಸ್ವಂದನ ತಂಡ ತಾತ್ಕಾಲಿಕ ಮನೆ ರಚನೆ ಮಾಡಿ ವಾಸ್ತವಕ್ಕೆ ಅನುಕೂಲ ಮಾಡಿಕೊಟ್ಟರು.

ಕಾರ್ಯಾಚರಣೆಯಲ್ಲಿ ತುರ್ತು ಸ್ಪಂದನಾ ತಂಡದ ಸ್ವಯಂ ಸೇವಕರಾದ ನೆರಿಯ ಘಟಕದ ಸ್ವಯಂ ಸೇವಕರಾದ ನಾಗೇಶ್ ಬಿ, ಸತೀಶ್ ಕೆ, ಅರಸಿನಮಕ್ಕಿ ಘಟಕದ ಅವಿನಾಶ್ ಭೀಡೆ, ಉಜಿರೆ ಘಟಕದ ಸ್ವಯಂ ಸೇವಕರಾದ ಸಚ್ಚಿನ್ ಭೀಡೆ, ಸಂದೇಶ್, ರವೀಂದ್ರ, ರಾಘವೇಂದ್ರ, ಸುಧೀರ್, ಸುಲೈಮಾನ್, ಅನಿಲ್ ಕುಮಾರ್, ಶಶಿ, ಅಶೋಕ್, ಸುಮಿತ್ರಾ ಇವರುಗಳು ತುರ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Exit mobile version