Site icon Suddi Belthangady

ಇಂದಬೆಟ್ಟು: ಕಲ್ಲಾಜೆ ನವಭಾರತ್ ಗಳೆಯರ ಬಳಗದ 11ನೇ ವಾರ್ಷಿಕ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ

ಇಂದಬೆಟ್ಟು: ಕಲ್ಲಾಜೆ ನವಭಾರತ್ ಗಳೆಯರ ಬಳಗ ಇದರ 11ನೇ ವಾರ್ಷಿಕ ಮಹಾಸಭೆಯು ಕಲ್ಲಾಜೆ ಶಾಲಾ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ನವಭಾರತ್ ಗಳೆಯರ ಬಳಗದ ಅಧ್ಯಕ್ಷ ಅಶ್ವಥ್ ರಾಜ್ ಕಲ್ಲಾಜೆ ವಹಿಸಿದ್ದರು.ಈ ಸಂದರ್ಭದಲ್ಲಿ 2024-2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ ಆಯ್ಕೆಯಾದರು.

ಅಧ್ಯಕ್ಷರಾಗಿ ಯತೀಶ್ ನೆರೋಳ್ದಪಲ್ಕೆ, ಕಾರ್ಯದರ್ಶಿಯಾಗಿ ಅವಿನಾಶ್ ಕಲ್ಲಾಜೆ, ಉಪಾಧ್ಯಕ್ಷರಾಗಿ ರಮೇಶ್ ನೂಜಿಲೆ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಹಾನಿಬೆಟ್ಟು, ಕೋಶಾಧಿಕಾರಿ ರಕ್ಷಿತ್ ನೆರೊಳ್ದಪಲ್ಕೆ, ಧಾರ್ಮಿಕ ವಿಭಾಗ ರಾಧಾಕೃಷ್ಣ ತುರ್ಕೆರಬೆಟ್ಟು ಮತ್ತು ಜಗದೀಶ್ ನೆರೊಳ್ದಪಲ್ಕೆ, ಆರೋಗ್ಯ ಮತ್ತು ಸಾಮಾಜಿಕ ವಿಭಾಗ ಸಂತೋಷ್ ದರ್ಖಾಸ್, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಭಾಗ ನಾಗೇಶ್ ಮುಂಡ್ರಬೆಟ್ಟು, ಕ್ರೀಡಾ ವಿಭಾಗ ಸಂತೋಷ್ ಪಡಂಬಿಲ, ಮಾಧ್ಯಮ ಮತ್ತು ಪ್ರಚಾರ ವಿಭಾಗ ಸುಕೇಶ್ ನಡುಮನೆ ಆಯ್ಕೆಯಾದರು.

Exit mobile version