Site icon Suddi Belthangady

ಕಲ್ಮಂಜ : ಸತ್ಯನಪಲ್ಕೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ

ಕಲ್ಮಂಜ: ಸತ್ಯನಪಲ್ಕೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಜು.11ರಂದು ಸತ್ಯನಪಲಿಕೆ ಸಂಘದ ವಠಾರದಲ್ಲಿ ಮೋಹನ್ ರಾವ್ ಕಲ್ಮಂಜ ಅವರ ಮುತುವರ್ಜಿಯಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭವನ್ನು ಮಂಗಳೂರು ದಕ್ಷಿಣ ಕನ್ನಡ ಸಹಕಾರಿ‌ ಹಾಲು‌ ಒಕ್ಕೂಟದ ಅಧ್ಯಕ್ಷರು ಕೆ.ಪಿ.‌ಸುಚರಿತ ಶೆಟ್ಟಿಯವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ದ.ಕ.ಸ.ಹಾಲು ಒಕ್ಕೂಟದ ಉಪಾಧ್ಯಕ್ಷರು ಎಸ್.ಬಿ., ಜಯರಾಮ ರೈ, ಮಂಗಳೂರು ದ.ಕ.ಸ.ಹಾಲು ಒಕ್ಕೂಟದ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣಪ್ರಕಾಶ್ ಕೆ.‌, ಸವಿತಾ ಎನ್.ಶೆಟ್ಟಿ ಹಾಗೂ ಮಂಗಳೂರು ದ.ಕ.ಸ.ಹಾಲು ಒಕ್ಕೂಟದ ವ್ಯವಸ್ಥಾಪಕರಾದ ವಿವೇಕ್ ಡಿ., ಡಾ.ರವಿರಾಜ ಉಡುಪ, ಸತೀಶ್ ರಾವ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಕಾಶ್ ಭಟ್ ಮಾಣಿಂಜೆ ಸ್ವಾಗತಿಸಿ, ಧನ್ಯವಾದಗೈದರು. ವಸಂತಿ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version