Site icon Suddi Belthangady

ಉಜಿರೆ: ಎಸ್.ಡಿ.ಎಂ ಪ.ಪೂ‌ ಕಾಲೇಜಿನ‌ ಕನ್ನಡ ಸಂಘ ಉದ್ಘಾಟನೆ- ಕಾಲೇಜಿನ ಕನ್ನಡ ಸಂಘದ ಚಟುವಟಿಕೆ ‘ವಿದ್ಯಾರ್ಥಿ ಸಮ್ಮೇಳನ’ದಂತಾಗಲಿ: ಅಚ್ಚು ಮುಂಡಾಜೆ

ಬೆಳ್ತಂಗಡಿ: ಕನ್ನಡ ಸಂಘದ ಚಟುವಟಿಕೆ ಉದ್ಘಾಟನಾ ಸಮಾರಂಭಕ್ಕೆ ಮಾತ್ರ ಸೀಮಿತವಾಗದೆ ಇಡೀ ವರ್ಷ ಕವಿಗೋಷ್ಠಿ, ಚಿಂತನ ಮಂಥನ, ಕವಿ ವಿಮರ್ಷೆ, ಭಿತ್ರಿ ಪತ್ರ ರಚನೆ, ವ್ಯಕ್ತಿ ಆಧರಿತ ಉಪನ್ಯಾಸ ಮಾಲಿಕೆ ಮುಂತಾದ ಯೋಜನೆಗಳೊಂದಿಗೆ ನಡೆದು ವರ್ಷಾಂತ್ಯಕ್ಕೆ ‘ವಿದ್ಯಾರ್ಥಿ ಸಮ್ಮೇಳನ’ ರೀತಿಯಲ್ಲಿ ಸಮಾರೋಪಗೊಳ್ಳುವಂತಾಗಬೇಕು ಎಂದು ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ, ಪತ್ರಕರ್ತ ಅಚ್ಚು
ಮುಂಡಾಜೆ ಅಭಿಪ್ರಾಯಪಟ್ಟರು.

ಉಜಿರೆ ಎಸ್ ಡಿ ಎಂ ಪ.ಪೂ ಕಾಲೇಜಿನಲ್ಲಿ ಜು.10ರಂದು ನಡೆದ ಕನ್ನಡ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ವಿಚಾರಗಳನ್ನೇ ಸಂವೇದನಾ ಶೀಲ ಮನೋಭಾವದಿಂದ ಕಂಡು ಲೇಖನ, ಕವನಗಳ ಮೂಲಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಂತಾಬೇಕು. ಪದಗಳ ಸಂಗ್ರಹಕ್ಕಾಗಿ ಓದುವ ಹವ್ಯಾಸ ಬಹುಮುಖ್ಯ. ಇಂಗ್ಲೀಷ್ ನಲ್ಲಿ ಕಲಿತರೆ ಮಾತ್ರ ಉನ್ನತ ಅವಕಾಶ ಎಂಬ ಮೊದಲಿಸುವಿಕೆ ತೊಲಗಿಸಿ ಕನ್ನಡಕ್ಕೂ ಭವಿಷ್ಯವಿದೆ ಎಂದು ತಮ್ಮ ಬರಹ, ವಿಮರ್ಷೆ, ಕವನ, ಸಾಹಿತ್ಯ‌ ರಚನೆ‍ಯ ಮೂಲಕ ತೋರಿಸಿಕೊಡಬಹುದು ಎಂದರು. ಭಾಷಣದ ಕೊನೆಗೆ ಅವರು ಸ್ವರಚಿತ ಕವನ ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಮಾತನಾಡಿ, ಇಂತಹಾ ಸಂಘಗಳಿಂದ ವಿದ್ಯಾರ್ಥಿಗಳಲ್ಲಿ ವಿಚಾರ ಆಸಕ್ತಿ ಹಾಗೂ ಪ್ರತಿಭೆ ಹೊರಬರಲು ಕಾರಣವಾಗುತ್ತದೆ. ಇದೂ ಅಲ್ಲದೆ ವರ್ಷ
ಸ್ಪರ್ಧೆ, ಭಿತ್ತಿ‌ಪತ್ರಿಕೆ ‌ಮೊದಲಾದವುಗಳ ಮೂಲಕ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತೇವೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ‌ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಾಜೇಶ್ ಬಿ ಉಪಸ್ಥಿತರಿದ್ದರು.

ಹಸೀನಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು.ಸಂಕೇತ್ ಸ್ವಾಗತಿಸಿದರು. ಕುಶ ಅತಿಥಿ ಪರಿಚಯ ಮಾಡಿದರು.ಸಾಕ್ಷಿ ನಿರೂಪಿಸಿದರು.ತೇಜನ್ ವಂದಿಸಿದರು.

Exit mobile version