Site icon Suddi Belthangady

ಕಾಯರ್ತಡ್ಕ ಹೊಂಡ, ಗುಂಡಿಗಳಿಂದ ಗಾಡಿಗೆ ತೊಂದರೆ- ಕೂಡಲೇ ಗಿಡ ನೆಟ್ಟು ಸವಾರರನ್ನು ಎಚ್ಚರಿಸಿದ ಪ್ರಯಾಣಿಕರು

ಕಾಯರ್ತಡ್ಕ: ಮಿಯಾರು- ಕಾಯರ್ತಡ್ಕ ರಸ್ತೆಯಲ್ಲಿರುವ ಬೃಹತ್ ಹೊಂಡ, ಗುಂಡಿಗಳ ಬಗ್ಗೆ ವರದಿ ಬಂತು.ಆದರೂ ಯಾವುದೇ ಕ್ರಮಕ್ಕೆ ಮುಂದಾಗಾದ ಜನಪ್ರತಿನಿಧಿಗಳು,ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದರ ನಡುವೆ ಕಾಯರ್ತಡ್ಕಕ್ಕೆ ಪ್ರಯಾಣಿಸುತ್ತಿದ್ದ ವಾಹನ ಸವಾರರು ತಮ್ಮ ವಾಹನಕ್ಕೆ ತೊಂದರೆ ಆದಾಗ ಬೇಸರಗೊಂಡ ವಾಹನ ಸವಾರ ನೆರಿಯದ ಎಸ್.ಎಮ್.ಎಸ್ ಶಾಮಿಯಾನದ ಇರ್ಫಾನ್ ನೆರಿಯ ರಸ್ತೆಯ ಗುಂಡಿಯಲ್ಲಿ ಗಿಡ ನೆಟ್ಟಿದ್ದಾರೆ.

ಈ ಮೂಲಕ ವಾಹನ ಸವಾರರನ್ನು ಆ ಬೃಹತ್ ಗುಂಡಿಯಿಂದ‌ ರಕ್ಷಿಸುವ ಕಾರ್ಯವನ್ನು ಮಾಡಿದ್ರೆ,ಮತ್ತೊಂದೆಡೆ ನಮ್ಮ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿರೋಧ ವ್ಯಕ್ತಪಡಿಸಿದಂತಾಗಿದೆ.

Exit mobile version