Site icon Suddi Belthangady

ಸುಲ್ಕೇರಿ: ಶ್ರೀ ರಾಮ ಶಾಲೆಗೆ ಅಶ್ವಥ್ ಹೆಗ್ಡೆಯವರಿಂದ ಊಟದ ಸ್ಟೀಲ್ ತಟ್ಟೆ ಕೊಡುಗೆ

ಸುಲ್ಕೇರಿ: ಸುಲ್ಕೇರಿ ಶ್ರೀ ರಾಮ ಶಾಲೆಯಲ್ಲಿ ಆಡಳಿತ ಮಂಡಳಿಯ ಮನವಿಯ ಮೇರೆಗೆ ಯುವ ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆ ಬಳಂಜ ಇವರು ಸುಮಾರು 650 ಶಾಲಾ ಮಕ್ಕಳಿಗೆ ಊಟದ ಸ್ಟೀಲ್ ತಟ್ಟೆಗಳನ್ನು ಜು.8ರಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದಿನೇಶ್ ಪಿ.ಕೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಜು ಪೂಜಾರಿ, ಸದಸ್ಯ ಶಶಿಧರ್ ಅಳದಂಗಡಿ ಹಾಗೂ ಶಾಲಾ ಮುಖ್ಯೋಪಾದ್ಯಾಯ ಪ್ರಮೋದ್ ಉಪಸ್ಥಿತರಿದ್ದರು.

Exit mobile version