Site icon Suddi Belthangady

ಉಜಿರೆ: ಕಥೋಲಿಕ್ ಸಭಾ ಘಟಕದ “ಜಲ ಬಂಧನ್ 2024” ಮಾಹಿತಿ ಕಾರ್ಯಾಗಾರ

ಉಜಿರೆ: ಕಥೋಲಿಕ್ ಸಭಾ ಘಟಕದ “ಜಲ ಬಂಧನ್ 2024” ಮಾಹಿತಿ ಕಾರ್ಯಾಗಾರವನ್ನು ಜು.7ರಂದು ಅನುಗ್ರಹ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ವಂ.ಫಾ.ಆಬೇಲ್ ಲೋಬೊ ಉದ್ಘಾಟಿಸಿ ಶುಭಕೋರಿ, ವಸತಿ ಯೋಜನೆಗೆ ಆಯ್ದ ಫಲಾನುಭವಿ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದರು.ಮಳೆ ನೀರಿನ ಸಂಗ್ರಹಣೆ, ನಿರ್ವಹಣೆ ಹಾಗೂ ಅನಿವಾರ್ಯತೆ ಬಗ್ಗೆ ನಿವೃತ್ತ ಜಲಾನಯನಾಧಿಕಾರಿ ನಾರಾಯಣ ಸುವರ್ಣ ಕಾರ್ಯಾಗಾರವನ್ನು ನಡೆಸಿಕೊಟ್ಟರು ಅನುಗ್ರಹ ಶಿ.ಸಂಸ್ಥೆಗಳ ಪ್ರಾಂಶುಪಾಲ ವಂ.ಫಾ.ವಿಜಯ್ ಲೋಬೊ, ವಂ.ಫಾ.ವಲೇರಿಯನ್ ಸಿಕ್ವೇರಾ, ಧರ್ಮ ಭಗಿನಿ ಸಿ| ನ್ಯಾನ್ಸಿ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟೊನಿ ಪೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಕ.ಸಭಾ ಅಧ್ಯಕ್ಷ ಆಂಟೊನಿ ಡಿಸೋಜ, ಪರಿಸರ ಆಯೋಗದ ಕಾರ್ಯದರ್ಶಿ ಸೆಬಾಸ್ಟಿಯನ್ ಡಿ’ಸೋಜ ಉಪಸ್ಥಿತರಿದ್ದರು.

ಆಂಟೊನಿ ಡಿ’ಸೋಜ ಸ್ವಾಗತಿಸಿ, ಲವೀನಾ ಫೆರ್ನಾಂಡಿಸ್ ನಿರೂಪಿಸಿ, ಕಾರ್ಯದರ್ಶಿ ಅನಿತಾ ವಂದಿಸಿದರು.

Exit mobile version