Site icon Suddi Belthangady

ಜುಲೈ 30ರಂದು ಬಗರ್ ಹುಕುಂ ಸಮಿತಿ ಸಭೆ-ಶಾಸಕ ಹರೀಶ್ ಪೂಂಜ ಮಾಹಿತಿ-ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆ

ಬೆಳ್ತಂಗಡಿ: ತಾಲೂಕು ಆಡಳಿತ ಸೌಧದಲ್ಲಿ ಬಗರ್ ಹುಕುಂ ಸಮಿತಿಯ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬಗರ್ ಹುಕುಂ ಸಮಿತಿಯ ಪೂರ್ವಭಾವಿ ಸಭೆ ಜು.8ರಂದು ನಡೆಯಿತು.

ಸಮಿತಿಯ ಸದಸ್ಯ ಕಾರ್ಯದರ್ಶಿ, ತಹಶೀಲ್ದಾರ್ ಪೃಥ್ವಿ ಸಾನಿಕಂ, ಸದಸ್ಯರಾದ ಅಯ್ಯೂಬ್, ವಿನುತ ರಜತ್‌ ಗೌಡ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.

ಜುಲೈ 30ರಂದು ಮೊದಲ ಬಗರ್ ಹುಕುಂ ಸಮಿತಿಯ ಸಭೆ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಸಾರ್ವಜನಿಕರ ಅಹವಾಲು ಸ್ವೀಕಾರ:
ಶಾಸಕ ಹರೀಶ್ ಪೂಂಜ ತಾಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭ ಸಾರ್ವಜನಿಕರು ಮನವಿಗಳನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ತಾಲೂಕು ಕಚೇರಿಯ ಸ್ವಚ್ಛತೆಯನ್ನೂ ಶಾಸಕರು ಇದೇ ಸಂದರ್ಭ ವೀಕ್ಷಿಸಿದರು.

Exit mobile version