Site icon Suddi Belthangady

ಗೇರುಕಟ್ಟೆ: ಮಲ್ಲೊಟ್ಟು ರಸ್ತೆ ದುರಸ್ಥಿ

ಗೇರುಕಟ್ಟೆ: ಮಲ್ಲೊಟ್ಟು ರಸ್ತೆಯ ಶಕ್ತಿಸದನ ಬಳಿ ಹರ್ಪಲ ಬಂದಾರಿಕೊಡಿಗೆ ಕೊಯ್ಯುರಿಗೆ ಹೋಗುವ ರಸ್ತೆಯು ಹದಗೆಟ್ಟಿದ್ದು, ಸಾರ್ವಜನಿಕರು ಓಡಾಡಲು ಪರದಾಡುತಿದ್ದರು.

ಸಮಸ್ಯೆಯನ್ನು ಮನಗಂಡ ಸ್ಥಳೀಯ ಯುವಕರ ತಂಡ ರಸ್ತೆಯನ್ನು ದುರಸ್ಥಿಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಸ್ಥಳೀಯರಾದ ಪುರಂದರ ಶೆಟ್ಟಿ ಬಂಡಾರಿಕೊಡಿ, ಜಯಕರ ಶೆಟ್ಟಿ, ಕೇಶವ, ಗಿರೀಶ್, ನಿತಿನ್, ನವೀನ್, ಮನೋಹರ, ರವಿ, ಜಗದೀಶ್ ಹರ್ಪಲ, ಪ್ರಸಾದ್ ಹರ್ಪಲ, ಅರವಿಂದ ಹರ್ಪಲ, ಮೊದಲಾದ ಯುವಕರ ತಂಡ ಭಾಗವಹಿಸಿದ್ದರು.

ಗೇರುಕಟ್ಟೆ ಬಿಜೆಪಿ ಯುವ ನಾಯಕ ಕರುನಾಕರ ಶೆಟ್ಟಿ ತಮ್ಮ ಪಿಕ್ ಅಪ್ ವಾಹನವನ್ನು ನೀಡಿ ಸಹಕರಿಸಿದರು.

Exit mobile version