Site icon Suddi Belthangady

ಕಿಲ್ಲೂರು ಮೊಹಿದ್ದೀನ್ ಜುಮಾ ಮಸೀದಿ ಇದರ ನೂತನ ಶಿಲಾನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಮತ್ತು ಬೆಳ್ತಂಗಡಿ ತಾಲೂಕಿನ ಎರಡನೇ ಮಸೀದಿ ಎಂದು ಖ್ಯಾತಿವೆತ್ತ ಕಿಲ್ಲೂರು ಮೊಹಿದ್ದೀನ್ ಜುಮಾ ಮಸೀದಿ ಇದರ ನೂತನ ಮಸೀದಿ ಶಿಲಾನ್ಯಾಸ ಹಾಗೂ ತಾತ್ಕಾಲಿಕ ಮಸ್ಜಿದ್ ಸ್ಥಳಾಂತರ ಮತ್ತು ವಕ್ಫ್ ನಿರ್ವಹಣಾ ಕಾರ್ಯಕ್ರಮ ದಿ. ಜುಲೈ 5ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಯುಕ್ತ ಖಾಝಿ ಖುರ್ರತುಲ್ ಸಾದತ್ ಕೂರ ತಂಗಲ್ ರವರ ನೇತೃತ್ವದಲ್ಲಿ ನಡೆಯಿತು. 

ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಜಮಾಅತ್ ಧರ್ಮ ಗುರುಗಳಾದ ಪಿ.ಬಿ ಶಂಶೀರ್ ಸಖಾಫಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್, ಮಲ್ಲಿಗೆ ಮನೆ ಕಾಸೀಮ್, ಅಬೂಬಕ್ಕರ್ ಮಲ್ಲಿಗೆ ಮನೆ, ಹಮೀದ್, ಹನೀಫ್ ಹೆಚ್.ಎನ್. ಹಾಗೂ ಕಿಲ್ಲೂರ್ ಮೊಹಲ್ಲಾದ ಎಲ್ಲಾ ಮಸೀದಿ ಪದಾಧಿಕಾರಿಗಳು, ಸಮೀತಿ ಸದಸ್ಯರು, ಮತ್ತು ಧರ್ಮ ಗುರುಗಳು ಜಮತರೂ ಉಪಸ್ಥಿತರಿದ್ದರು.

Exit mobile version