Site icon Suddi Belthangady

ಹಾರೆ ಹಿಡಿದು ರಸ್ತೆಯ ಚರಂಡಿ ಬಿಡಿಸಿ ಮಾದರಿಯಾದ ಕುತ್ಲೂರು ಗ್ರಾ.ಪಂ ಸದಸ್ಯ ಸಂತೋಷ್ ಪೂಜಾರಿ ಮರ್ದೊಟ್ಟು

ಕುತ್ಲೂರು: ಕುತ್ಲೂರು ಗ್ರಾಮದ ಮಂಜುಶ್ರೀ ಭಜನಾ ಮಂಡಳಿ ಹಾಗೂ ಸರ್ಕಾರಿ ಶಾಲೆಯ ತಿರುವು ಮಾರ್ಗದ ಬಳಿ ಚರಂಡಿಯ ನೀರು ಮುಖ್ಯರಸ್ತೆಯ ಮೇಲೆ ಹರಿದು ಹೋಗುತ್ತಿದ್ದು ಹಾಗೂ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರಿಗೆ, ಪಾದಾಚಾರಿಗಳಿಗೆ, ಶಾಲಾ ಮಕ್ಕಳಿಗೆ ನಡೆದಾಡಲು ತೊಂದರೆ ಉಂಟಾಗುತ್ತಿತ್ತು.

ಈ ಸಮಸ್ಯೆಯನ್ನು ಮನಗಂಡ ಕುತ್ಲೂರು ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಪೂಜಾರಿ ಮರ್ದೊಟ್ಟು ರವರು ಖುದ್ದಾಗಿ ಹಾರೆ ಹಿಡಿದು, ಈ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಿಕೊಟ್ಟಿದ್ದಾರೆ.

Exit mobile version