Site icon Suddi Belthangady

ಬೆಳ್ತಂಗಡಿ ರೋಟರಿ ಕ್ಲಬ್ ಪೂರನ್ ವರ್ಮ ತಂಡದ ಪದಗ್ರಹಣ

ಉಜಿರೆ: ರೋಟರಿ ಕ್ಲಬ್ ಬೆಳ್ತಂಗಡಿ ಇದರ 54ನೇ ವರ್ಷದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.4ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದಲ್ಲಿ ನಡೆಯಿತು.ರೋಟರಿ ಜಿಲ್ಲೆಯ ನಿಯೋಜಿತ ಗವರ್ನರ್ ರೊ. ಮೇಜರ್ ಡೋನರ್ ಪಿ.ಕೆ.ರಾಮಕೃಷ್ಣ ಪದಾಪ್ರದಾನ ನೆರವೇರಿಸಿದರು.ಸಹಾಯಕ ಗವರ್ನರ್ ರೊ.ಮೊಹಮ್ಮದ್ ವಳವೂರು ಭಾಗವಹಿಸಿದ್ದರು.ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ವರದಿ ವಾಚಿಸಿದರು.

ನೂತನ ಅಧ್ಯಕ್ಷ ಪೂರನ್ ವರ್ಮ, ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ಕೋಶಾಧಿಕಾರಿ ಅಬೂಬಕ್ಕರ್ ಯು.ಹೆಚ್.ಇತರ ಪದಾಧಿಕಾರಿಗಳಾದ ದಂಡಪಾಣಿಯಾಗಿ ರೊ.ವೈಕುಂಠ ಪ್ರಭು, ನಿರ್ದೇಶಕರುಗಳಾದ ರೊ.ಪ್ರಕಾಶ್ ಪ್ರಭು, ರೊ.ಡಾ.ದಯಾಕರ್ ಎಂ, ರೊ. ಡಾ| ಸಾತ್ವಿಕ್ ಜೈನ್, ರೊ.ಡಾ.ಜಯಕುಮಾ‌ರ್ ಶೆಟ್ಟಿ, ರೊ.ರಕ್ಷಾ ರಾಘಶ್, ಟಿ.ಆರ್.ಎಫ್.ಚಯರ್ ಮನ್ ರೊ.ಮೇ.ಜನರಲ್ ಮೇಜರ್ ಡೋನರ್ ಎಂ. ವಿ. ಭಟ್, ಪಬ್ಲಿಕ್ ಇಮೇಜ್ ಚಯರ್ ಮನ್ ರೊ.ಬಿ.ಕೆ. ಧನಂಜಯ್ ರಾವ್, ಆರ್.ಸಿ.ಸಿ ಚೆಯರ್ ಮನ್ ರೊ.ವಿವೇಕ್ ಸಂಪತ್ ಆರಿಗ, ರೋಟರ್-ನ ಎಡಿಟರ್ ರೊ.ಶ್ರೀಧರ್ ಕೆ. ವಿ. ಡಿಸ್ಟಿಂಕ್ಟ್ ಪ್ರೊಜೆಕ್ಟ್ ಛೇರ್ಮನ್ ರೋ.ಶ್ರವಣ್ ಕಾಂತಾಜೆ ಇವರಿಗೆ ಪದ ಪ್ರಧಾನ ಸ್ವೀಕರಿಸಿದರು.

Exit mobile version