Site icon Suddi Belthangady

ಕಲ್ಮಂಜ: ನಿಡಿಗಲ್ ಯುವ ಬಿಲ್ಲವ ವೇದಿಕೆ ಮಾಸಿಕ ಸಭೆ

ಕಲ್ಮಂಜ: ನಿಡಿಗಲ್ ಯುವ ಬಿಲ್ಲವ ವೇದಿಕೆ ಇದರ ಮಾಸಿಕ ಸಭೆಯು ಅಕ್ಷಯನಗರ ಜಿನ್ನಪ್ಪ ಪೂಜಾರಿ ದರ್ಖಾಸು ಇವರ ಮನೆಯಲ್ಲಿ ಜು.1ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.ಈ ಸಂದರ್ಭದಲ್ಲಿ ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 577 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪ್ರಣಮ್ಯ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿನ್ನಪ್ಪ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿತಿಗಳಾಗಿ ವಿಶ್ವನಾಥ ಬಂಗೇರ ದರ್ಕಾಸು, ರವಿಚಂದ್ರ ಪೂಜಾರಿ ಸಂಘದ ಅಧ್ಯಕ್ಷರಾದ ನಿರಂಜನ್ ಪೂಜಾರಿ, ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ನಾರಾಯಣ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಪೂಜಾರಿ ಸ್ವಾಗತಿಸಿ ಸಂಘದ ಕಾರ್ಯದರ್ಶಿ ರುಕೇಶ್ ಪೂಜಾರಿ ವಂದಿಸಿದರು. ಸಂಘದ ಸದಸ್ಯರು ಸಹಕರಿಸಿದರು.

Exit mobile version