Site icon Suddi Belthangady

ಕಣಿಯೂರು: ಅಕ್ರಮವಾಗಿ ಅತಿಕ್ರಮಣ ಮಾಡಿ ರಸ್ತೆ ಬದಿ ಬೇಲಿ ಹಾಕಿದ್ದನ್ನು ತೆರವುಗೊಳಿಸಿದ ಅಧಿಕಾರಿಗಳು

ಕಣಿಯೂರು: ಪದ್ಮುಂಜ ಕ್ವಾಟ್ರಾಸ್ ನಿಂದ ಪುದೊಟ್ಟು ದೈವಸ್ಥಾನಕ್ಕೆ ಹೋಗುವ ಪಂಚಾಯತ್ ರಸ್ತೆಯನ್ನು ಖಾಸಗಿಯವರು ಅಕ್ರಮವಾಗಿ ಅತಿಕ್ರಮಣ ಮಾಡಿ ರಸ್ತೆ ಬದಿ ಬೇಲಿ ಹಾಕಿದ್ದನ್ನು ಪಂಚಾಯತ್ ನೋಟಿಸ್ ಮಾಡಿ ತದನಂತರ ತಹಸೀಲ್ದಾರ್ ಆದೇಶದಂತೆ ಕೊಕ್ಕಡ ಹೋಬಳಿ ಕಂದಾಯ ನೀರಿಕ್ಷಕ ಪಾವಡಪ್ಪ ದೊಡ್ಡಮನಿ ಹಾಗೂ ಗ್ರಾಮ ಆಡಳಿತಾಧಿಕಾರಿ ಉಷಾರವರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಬೇಲಿ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಕಣಿಯೂರು ಪಂಚಾಯತ್ ಅಧ್ಯಕ್ಷ ಯಶವಂತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಪಂಚಾಯತ್ ಸದಸ್ಯರಾದ ಅಮಿತ್, ಗಾಯತ್ರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Exit mobile version