Site icon Suddi Belthangady

ಅಂಡಿಂಜೆ: ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

ಅಂಡಿಂಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ವೇಣೂರು ವಲಯದ ಅಂಡಿಂಜೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮ ಶ್ರೀ ವಿನಾಯಕ ಶ್ರೀ ರಾಮ ಭಜನಾ ಮಂದಿರ ಅಂಡಿoಜೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್ ಮಂಡೆವು ಮಾಡಿ ಮಾತನಾಡುತ್ತ ಬೆಳ್ತಂಗಡಿ ತಾಲೂಕಿನಲ್ಲಿ ಜನ ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾಲಂಬಿಯಾಗಿ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆ ಯವರು ಎಂದು ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು.ನಾವು ಇದನ್ನ ಯಾರೂ ಕೂಡ ಮರೆಯಬಾರದು ಎಂದು ಸಲಹೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ದುಶ್ಚಟಕ್ಕೆ ಬಲಿಯಾದವರನ್ನ ಸಮಾಜದ ಮುಖ್ಯ ವಾಹಿನಿಗೆ ತಂದಿರುವುದು ಸಾವಿರಾರು ಕುಟುಂಬಗಳಿಗೆ ಹೊಸ ಬೆಳಕನ್ನು ನೀಡಿದೆ ಸಮಾಜದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನ ಪೂಜ್ಯರು ತಂದಿದ್ದಾರೆ.ಕಡು ಬಡತನದಲ್ಲಿ ಇರುವ ಕುಟುಂಬಗಳಿಗೆ ಸತ್ಯ ನಾರಾಯಣ ಪೂಜೆಯನ್ನು ಮಾಡಲೂ ಆರ್ಥಿಕ ಅಡಚಣೆಯನ್ನು ಗಮನಿಸಿದ ಪುಜ್ಯರು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಆಯೋಜನೆ ಮಾಡುವ ಮೂಲಕ ಗ್ರಾಮದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ ದೇವರ ಕೃಪೆಗೆ ಪಾತ್ರರಾಗುವ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಜನಾ ಮಂಡಳಿಗಳ ರಚನೆ, ಭಜನಾ ಮಂದಿರ ನಿರ್ಮಾಣಕ್ಕೆ ಅರ್ಥಿಕ ಸಹಕಾರ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅಪಾರ ಮುಂದಿನ ಪೀಳಿಗೆಗೆ ಇವುಗಳನ್ನ ಪರಿಚಯಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ತುಳುನಾಡಿನ ಸಂಸ್ಕೃತಿಯನ್ನು ಮರು ಸೃಷ್ಟಿಸಿದ ಕೀರ್ತಿ ಯೋಜನೆಗೆ ಸಲ್ಲುತ್ತದೆ ಸರಕಾರ ಮಾಡುವ ಕೆಲಸಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಯೋಜನೆ ಕಾರ್ಯ ನಿರ್ವಹಿಸಿಸುತ್ತಿದೆ ಎಂದು ಸಂತಸವನ್ನು ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ 1 ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡುತ್ತ ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕುಗಳ ಜೋತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಾರಿಟೇಬಲ್ ಟ್ರಸ್ಟ್ ಮೂಲಕ ಒಪ್ಪಂದ ಮಾಡಿಕೊಂಡು ಗುಂಪುಗಳ ಖಾತೆಯನ್ನು ತೆರೆದು ಗುಂಪಿನ ಸದಸ್ಯರಿಗೆ ಅರ್ಥಿಕ ಸಹಕಾರ ಒದಗಿಸಲಾಗುತ್ತದೆ ಇದರ ಮೂಲಕ ಜನರಿಗೆ ಬ್ಯಾಂಕ್ ಸೌಲಭ್ಯ ವನ್ನ ಮನೆ ಬಾಗಿಲಿಗೆ ತಲೂಪಿಸಿದಂತೆ ಆಗಿದೆ ಎಂದರು.

ಜನ ಜಾಗೃತಿ ವೇದಿಕೆಯ ವಲಯ ಅದ್ಯಕ್ಷ ಮೋಹನ್ ಅಂಡಿoಜೆ ಮಾತನಾಡುತ್ತ ಬಯಲು ಮುಕ್ತ ಗ್ರಾಮ ನಿರ್ಮಾಣ ಮಾಡುವಲ್ಲಿ ಯೊಜನೆ ಶ್ರಮಿಸಿದ ಪರಿಣಾಮ ಪ್ರತೀ ಮನೆಯಲ್ಲಿಯೂ ಶೌಚಾಲಯ ನಿರ್ಮಾಣದ ಜಾಗೃತಿ ಮೂಡಿದೆ ಎಂದರು. ಅಪಪ್ರಚರಾಗಳಿಗೆ ಹೆಚ್ಚು ಗಮನ ಕೊಡದೆ ಸತ್ಯದ ಕಡೆಗೆ ಗಮನ ಹರಿಸಬೇಕು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಚಟುವಟಿಕೆಗಳಿಗೆ ಯಾರೂ ಕೂಡ ಸಹಕಾರ ನೀಡಬಾರದು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಶ್ರೀ ವಿನಾಯಕ ಶ್ರೀ ರಾಮ ಭಜನಾ ಮಂದಿರದ ಅದ್ಯಕ್ಷ ಸುರೇಂದ್ರ ಕಂಬಳಿ ಬಲ್ಲೋಲಿಗೆ ಗುತ್ತು, ವಸಂತ ಎಚ್ ಸಾಲಿಯಾನ್, ಪಂಚಾಯತ್ ಉಪಾಧ್ಯಕ್ಷೆ ಶ್ವೇತಾ ಪರಮೇಶ್ವರ್ , ತಾಲೂಕ್ ಯೋಜನಾಧಿಕಾರಿ ದಯಾನಂದ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷ ಆನಂದ ಪೂಜಾರಿ, ಶ್ರೀದರ ಪೂಜಾರಿ, ನೂತನ ಅಧ್ಯಕ್ಷ ಯಶೋದರ ಪೂಜಾರಿ, ಸುಲೋಚನಾ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ವಸಂತ ಮಡಿವಾಳ ಅಧ್ಯಕ್ಷತೆಯನ್ನು ವಹಿಸಿದ್ದರು. ವಲಯ ಮೇಲ್ವಿಚಾರಕಿ ಶಾಲಿನಿ ಸ್ವಾಗತಿಸಿದರು, ಸೇವಾಪ್ರತಿನಿಧಿಗಳಾದ ಬಾಗ್ಯ ಹಾಗು ನಳಿನಿ ಸಹಕರಿಸಿದರು.ಅಂಡಿಂಜೆ ಯುವಕ ಮಂಡಲದ ಅದ್ಯಕ್ಷ ಪ್ರಾಣೇಶ್ ನಿರೂಪಿಸಿದರು.

Exit mobile version