Site icon Suddi Belthangady

ಉಜಿರೆ: ಯುವವಾಹಿನಿ ಸಂಚಲನ ಸಮಿತಿ, ಶ್ರೀ ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗುರು ಪೂಜೆ

ಉಜಿರೆ: ಯುವ ವಾಹಿನಿ ಸಂಚಲನ ಸಮಿತಿ ಉಜಿರೆ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಉಜಿರೆ ಇದರ ಜಂಟಿ ಆಶ್ರಯದಲ್ಲಿ ಜೂ.30ರಂದು ಉಜಿರೆ ಎಸ್.ಕೆ.ಮೆಮೋರಿಯಲ್ ಹಾಲ್ ನಲ್ಲಿ ಗುರು ಪೂಜೆ ನಡೆಯಿತು.ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮಿಜಿ ಆಶೀರ್ವಚನ ನೀಡಿದರು.

ಸಭಾಧ್ಯಕ್ಷತೆಯನ್ನು ಉಜಿರೆ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಬರೆಮೇಲು ವಹಿಸಿದ್ದರು.

ಉಜಿರೆ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾಶಿವ ಊರ, ಸಂಪತ್ ಸುವರ್ಣ, ಬೆಳ್ತಂಗಡಿ ಯುವಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ. ಪ್ರಸಾದ್, ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ ಕಲಾಯಿ, ಉಜಿರೆ ಯುವ ವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಕಿಶೋರ್ ಪೆರ್ಲ, ಸಿವಿಲ್ ಇಂಜಿನಿಯರ್ ಸೂರ್ಯನಾರಾಯಣ ಉಜಿರೆ, ಸಿವಿಲ್ ಇಂಜಿನಿಯರ್, ತಾಲೂಕು ಸಂಘದ ನಿರ್ದೇಶಕಿ ಜಿ.ಪ.ಮಾಜಿ ಸದಸ್ಯೆ ನಮಿತಾ ತೋಟತ್ತಾಡಿ, ಉಜಿರೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ನಾಗವೇಣಿ, ಸವಿತಾ ಉಪಸ್ಥಿತರಿದ್ದರು.

ಶಿಕ್ಷಕ ಸುರೇಶ್ ಮಾಚಾರು ಸ್ವಾಗತಿಸಿ, ಪ್ರಜ್ಞಾ ಓಡಿನ್ನಾಲ ನಿರೂಪಿಸಿ, ಧನ್ಯವಾದಿಸಿದರು.ಕಾರ್ಯಕ್ರಮದ ಮೊದಲು ಗುರು ಪೂಜೆ ನಡೆಯಿತು.

Exit mobile version