Site icon Suddi Belthangady

ಬೆಳಾಲು: ಮಾಯ ಸರಕಾರಿ ಉ.ಪ್ರಾ. ಶಾಲೆಯಲ್ಲಿ ಶ್ರಮದಾನ

ಬೆಳಾಲು: ಸ‌ರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾಯದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಹಾಗೂ ಪೋಷಕರು ಸೇರಿ ಜೂ.29ರಂದು ಶಾಲಾ ಕೈತೋಟದಲ್ಲಿ ವಿವಿಧ ತರಕಾರಿ ಬೀಜಗಳನ್ನು ನೆಟ್ಟು, ಶಾಲೆಯ ಪರಿಸರವನ್ನು ಸ್ವಚ್ಛಗೊಳಿಸಿ ಶ್ರಮದಾನ ಮಾಡಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಂದ್ರ ಗೌಡ ಸುರುಳಿ, ಉಪಾಧ್ಯಕ್ಷೆ ಭವಾನಿ ಇತರ ಸದಸ್ಯರು ಹಾಗೂ ಪೋಷಕರ ಸಹಕಾರದಿಂದ ಉತ್ತಮ ರೀತಿಯಲ್ಲಿ ಶ್ರಮದಾನ ನಡೆಯಿತು.ಉಪಹಾರದ ವ್ಯವಸ್ಥೆಯನ್ನು ಪೋಷಕ ಸುಂದರ ಪೆಲತ್ತಡಿ ಹಾಗೂ ಗಿಡಗಳಿಗೆ ಗೊಬ್ಬರ ವ್ಯವಸ್ಥೆಯನ್ನು ರಾಘವೇಂದ್ರ ಪುಚ್ಚೆಹಿತ್ಲು ನೀಡಿ ಸಹಕರಿಸಿದರು.ಮುಖ್ಯಶಿಕ್ಷಕ ವಿಠಲ್ ಎಂ ಕೃತಜ್ಞತೆ ಸಲ್ಲಿಸಿದರು.

Exit mobile version