Site icon Suddi Belthangady

ವಿದ್ಯುತ್ ಶಾಕ್: ಮೃತಪಟ್ಟ ಶಿಬಾಜೆಯ ಪ್ರತೀಕ್ಷಾ ಶೆಟ್ಟಿ ಮನೆಯವರಿಗೆ 5 ಲಕ್ಷ ರೂ ಪರಿಹಾರ ನೀಡಲು, ಮೆಸ್ಕಾಂ ವಿರುದ್ಧ ಕೇಸ್ ದಾಖಲಿಸಲು ಸ್ಪೀಕರ್ ಖಾದರ್ ಸೂಚನೆ

ಬೆಳ್ತಂಗಡಿ: ಶಿಬಾಜೆಯ ಬರ್ಗುಲಾದಲ್ಲಿ ಜೂನ್ 27ರಂದು ಸಂಜೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿರುವ ಪ್ರತೀಕ್ಷಾ ಶೆಟ್ಟಿ ಅವರ ಮನೆಯವರಿಗೆ ಐದು ಲಕ್ಷ ರೂ ಪರಿಹಾರ ನೀಡಲು ಮೆಸ್ಕಾಂಗೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸೂಚನೆ‌ ನೀಡಿದ್ದಾರೆ.‌

ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಶಿಫಾರಸ್ಸಿನ‌ ಮೇರೆಗೆ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ. ಅಲ್ಲದೆ, ನಿರ್ಲಕ್ಷ್ಯ ವಹಿಸಿರುವ ಮೆಸ್ಕಾಂ ವಿರುದ್ಧ ಐಪಿಸಿ 304 ಅಡಿಯಲ್ಲಿ ಕೇಸು ದಾಖಲಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Exit mobile version