Site icon Suddi Belthangady

ಬೆಳಾಲು: ಪ್ರೌಢಶಾಲೆಯಲ್ಲಿ ಗಾಯನ ತರಗತಿ ಆರಂಭ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಉಜಿರೆ ಶ್ರೀ ಧ.ಮಂ ಎಜ್ಯುಕೇಶನಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಗಾಯನ ತರಗತಿ ಆರಂಭವಾಯಿತು.

ಸಂಗೀತ ಶಿಕ್ಷಕಿಯಾಗಿ ಶ್ರೀದೇವಿ ಧರ್ಮಸ್ಥಳ ಆಗಮಿಸಿದ್ದು, ಶೈಕ್ಷಣಿಕ ಚಟುವಟಿಕೆಯಾಗಿ ನಿರಂತರ ತರಗತಿಯನ್ನು ನಡೆಸಲಿದ್ದಾರೆ. ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ರವರು ಸಂಗೀತ ಶಿಕ್ಷಕಿಯವರನ್ನು ಪರಿಚಯಿಸಿ ಸ್ವಾಗತಿಸಿದರು. ತರಗತಿಯ ಉಸ್ತುವಾರಿ ಶಿಕ್ಷಕಿ ರಾಜಶ್ರೀಯವರು ವಂದಿಸಿದರು.

Exit mobile version