Site icon Suddi Belthangady

ಚರ್ಮಗಂಟು ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ: ಚರ್ಮಗಂಟು ರೋಗ ನಿರೋಧಕ ಲಸಿಕ ಅಭಿಯಾನ ಉದ್ಘಾಟನಾ ಕಾರ್ಯಕ್ರಮ ಉಮೇಶ್ ಗುಡಿಗಾರ್ ರವರ ಡೈರಿ ಫಾರ್ಮ್ನಲ್ಲಿ ಜೂ.26ರಂದು ನಡೆಯಿತು.

ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಲತಾ ರವರು ಕಾರ್ಯಕ್ರಮ ಉದ್ಘಾಟಿಸಿದರು.

ಕಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಗೌಡ, ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ.ರವಿಕುಮಾರ್ ಎಮ್, ಹಾಗೂ ಬೆಳ್ತಂಗಡಿ ಕೆ.ಎಂ.ಎಫ್‌ನ ಸಹಾಯಕ ವ್ಯವಸ್ಥಾಪಕ ಡಾ.ಗಣಪತಿ, ಪಶುವೈದ್ಯಕೀಯ ಪರೀಕ್ಷಕ ಪ್ರಶಾಂತ್, ರಾಜವರ್ಮ ಜೈನ್ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.

Exit mobile version