Site icon Suddi Belthangady

ರಸ್ತೆ ಅಪಘಾತದಲ್ಲಿ ಗಾಯಗೊಂಡ ಶಿವರಾಮ್ ರಿಗೆ ಕೆಇಬಿ ಭಾಸ್ಕರ್ ಗುರುಸ್ವಾಮಿ ಇವರ ನೇತೃತ್ವದಲ್ಲಿ ಸಹಾಯಧನ ಹಸ್ತಾಂತರ

ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ಬಸ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಹೂವಿನ ವ್ಯಾಪಾರಿ ಆಗಿದ್ದ ಶಿವರಾಮ್ ಇವರಿಗೆ ಕೆಇಬಿ ಭಾಸ್ಕರ್ ಗುರುಸ್ವಾಮಿ ಇವರ ನೇತೃತ್ವದಲ್ಲಿ ಸಂಗ್ರಹಿಸಿದ 53,011/- ಮೊತ್ತವನ್ನು ಇಂದು ಜೂನ್ 25ರಂದು ಶಿವರಾಮ್ ಇವರ ಮನೆಯಲ್ಲಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂತೋಷ್ ಕಟ್ಟೆ, ಮಂಜುನಾಥ್ ಉಜಿರೆ , ಜಗನ್ನಾಥ್, ಶಿವರಾಂ ಚಂದ ಸ್ಟೋರ್ ಬೆಳ್ತಂಗಡಿ, ಭಾಸ್ಕರ್ ಸಚಿನ್ ಹುಣ್ಸೆಕಟ್ಟೆ, ಹರೀಶ್ ಆಚಾರ್ಯ, ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು

Exit mobile version