Site icon Suddi Belthangady

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ದಂಪತಿಗಳು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕಳೆoಜ ನಂದಗೋಕುಲ ಗೋಶಾಲೆಗೆ ಗೊಗ್ರಾಸಕ್ಕಾಗಿ ದೇಣಿಗೆ ಹಸ್ತಾಂತರ

ಕಳೆoಜ: ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಆರಿಕೊಡಿ ಇದರ ಧರ್ಮದರ್ಶಿ ಹರೀಶ್ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ನಮ್ಮ ಕಳೆoಜ ನಂದಗೋಕುಲ ಗೋಶಾಲೆಗೆ ಪತ್ನಿ ಸಮೇತ ಆಗಮಿಸಿ, ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ಗೋಶಾಲೆಯ ಗೊಗ್ರಾಸಕ್ಕಾಗಿ 25,000 /- ನಗದು ನೀಡಿದರು.ಗೋಶಾಲೆಯ ಸದಾಕಾಲ ಸಹಕರಿಸುವುದಾಗಿ ತಿಳಿಸುತ್ತ, ಕಾರ್ಯಕ್ರಮ ಚಟುವಟಿಕೆಯ ಮೆಚ್ಚುಗೆ ವ್ಯಕ್ತಪಡಿಸಿದರು.ಅವರನ್ನು ಗೋಶಾಲೆಯ ಪರವಾಗಿ ಅಭಿನoದಿಸಲಾಯಿತು.

ಈ ಸಂದರ್ಭದಲ್ಲಿ ನಂದಗೋಕುಲ ಗೋಶಾಲೆಯ ಅಧ್ಯಕ್ಷ ಡಾ.ದಯಾಕರ, ಆರಿಕೋಡಿ ಚಾಮುಂಡೇಶ್ವರಿ ದೇವಸ್ಥಾನದ ಸಿಬ್ಬಂದಿಗಳು ಮತ್ತು ನಂದಗೋಕುಲ ಗೋಶಾಲೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version