Site icon Suddi Belthangady

ಕಾಯರ್ತಡ್ಕ: ದಿವ್ಯಜೋತಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

ಕಾಯರ್ತಡ್ಕ: ದಿವ್ಯಜೋತಿ ಆಂಗ್ಲ ಮಾದ್ಯಮ ಶಾಲೆಯಲ್ಲಿ 2024-25ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮೊದಲ ಸಭೆ ನಡೆಯಿತು.

ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮನೋಜ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಸೇಕ್ರೆಡ್ ಹಾರ್ಟ್ ಸಮೂಹ ಸಂಸ್ಥೆಗಳ ರೀಜನಲ್ ಸುಪೀರಿಯರ್ ಆದ ಸಿಸ್ಟರ್ ಲಿಸ್ ಮ್ಯಾಥ್ಯು ಸಭೆಯನ್ನು ಉದ್ಘಾಟನೆ ಮಾಡಿದರು.

ಶಾಲಾ ಸಂಚಾಲಕಿ ಸಿಸ್ಟರ್ ಮೆರ್ಸಿ ಚೆರಿಯನ್, ಮುಖ್ಯ ಶಿಕ್ಷಕಿ ಸಿಸ್ಟರ್ ದಿವ್ಯಮರಿಯ ಹಾಗೂ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸಾವಿತ್ರಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ನಂತರ ಹೃದಯ ರಾಮ್ ಕೌನ್ಸಿಲಿಂಗ್ ಸೆಂಟರ್ ನೆಲ್ಯಾಡಿ ಇಲ್ಲಿನ ಕೌನ್ಸಿಲರ್ ಆದ ಸಿಸ್ಟರ್ ಆಲ್ಫಿ ಜೋಸೆಫ್ ಹಾಗೂ ಸಿಸ್ಟರ್ ಬ್ಲೆಸ್ಸಿ ಮರಿಯ ಎಸ್ ಹೆಚ್ ಇವರಿಂದ “ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರ ಮಹತ್ವ”ದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಶಿಕ್ಷಕಿ ಅಮಿತಾ ಸ್ವಾಗತಿಸಿ, ಪುಷ್ಪ ಇವರು ವರದಿಯನ್ನು ವಾಚಿಸಿ, ಶಿಕ್ಷಕ ಸುರೇಶ್ ಶೆಟ್ಟಿ ನಿರೂಪಿಸಿ, ಶಿಕ್ಷಕಿ ಶ್ರಾವ್ಯ ಕಾರ್ಯಕ್ರಮವನ್ನು ವಂದನಾರ್ಪಣೆಗೈದರು.

Exit mobile version