Site icon Suddi Belthangady

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಸಂಘದ ವತಿಯಿಂದ ಶ್ರಮದಾನ

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಸಂಘದ ವತಿಯಿಂದ ಶ್ರಮದಾನ ಜೂ 22ರಂದು ನಡೆಯಿತು.

ಕಾಯರ್ತಡ್ಕ ದಿಂದ ಶಿಬರಾಜೆಯ ಪಾದೆವರೆಗೆ ರಸ್ತೆಯ ಅಕ್ಕ ಪಕ್ಕದ ಗಿಡಗಂಟೆಗಳನ್ನು ತೆಗೆದು ಗುಂಡಿ ಮುಚ್ಚುವ ಕಾರ್ಯವನ್ನು ಮಾಡಲಾಗುವುದು ಎಂದು ಸಂಘದ ಸದಸ್ಯರು ತಿಳಿಸಿದರು.

ಸಂಘದ ಅಧ್ಯಕ್ಷ ಜೋಸೆಫ್ ಕೆ.ಡಿ., ಸಂಘದ ಗೌರವಾಧ್ಯಕ್ಷ ಪಿ.ಟಿ ಸಬಾಸ್ಟಿನ್, ಉಪಾಧ್ಯಕ್ಷ ಶಾಜಿ ತೋಮಸ್, ಕಾರ್ಯದರ್ಶಿ ತೋಮಸ್ ಪಿ.ಡಿ, ಕೋಶಾಧಿಕಾರಿ ಮ್ಯಾತ್ಯು ಕೆ.ಕೆ ಉಪಸ್ಥಿತರಿದ್ದರು.

ಸುಮಾರು 40ಕ್ಕೂ ಹೆಚ್ಚು ಜನರು ಶ್ರಮದಾನದಲ್ಲಿ ಪಾಲ್ಗೊಂಡರು.

Exit mobile version