Site icon Suddi Belthangady

ಬೆಳಾಲು ಪ್ರೌಢಶಾಲೆಯ ಮಕ್ಕಳಿಂದ ಪಂಚಾಯತ್ ವಾಚನಾಲಯ ಸಂದರ್ಶನ

ಬೆಳಾಲು: ಮಗುವಿಗೊಂದು ಪುಸ್ತಕ ನೀಡಿ ಕಾರ್ಯಕ್ರಮದಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಬೆಳಾಲು ಗ್ರಾಮ ಪಂಚಾಯತ್ ನ ವಾಚನಾಲಯದ ಭೇಟಿ ಮತ್ತು ಸದಸ್ಯತನದ ನೋಂದಣಿ ಕಾರ್ಯಕ್ರಮ ಜರಗಿತು.

ಮೂರು ತರಗತಿಗಳಿಗೆ ಆಯೋಜಿಸಲ್ಪಡುವ ಈ ಕಾರ್ಯಕ್ರಮದಲ್ಲಿ ಮೊದಲ ತಂಡವಾಗಿ 8ನೇ ತರಗತಿಯ ವಿದ್ಯಾರ್ಥಿಗಳು ವಾಚನಾಲಯ ಸಂದರ್ಶನ, ಪುಸ್ತಕ ಓದುವ ಮತ್ತು ಸದಸ್ಯರಾಗುವ ಮೂಲಕ ಗ್ರಂಥಗಳ ಮತ್ತು ಓದಿನ ಮಹತ್ವವನ್ನು ಅರಿತುಕೊಂಡರು.

ಪಂಚಾಯತ್ ನ ಗ್ರಂಥಪಾಲಕ ಡೀಕಯ್ಯ ಗೌಡ ಅರಣೆಮಾರುರವರು ಪರಿಚಯ ಮಾಡಿದರು. ಶಾಲೆಯ ಗ್ರಂಥಪಾಲಕರಾದ ಚಿತ್ರಾರವರು ಕಾರ್ಯಕ್ರಮವನ್ನು ಸಂಯೋಜಿಸಿದರು.

Exit mobile version