Site icon Suddi Belthangady

ಗುರಿಪಳ್ಳ: ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಹರೀಶ್ ಗೌಡ, ಪ್ರ.ಕಾರ್ಯದರ್ಶಿಯಾಗಿ ಮಮತಾ ಸುಭಾಷ್, ಕೋಶಾಧಿಕಾರಿಯಾಗಿ ಸಂತೋಷ್ ಗೌಡ ಆಯ್ಕೆ

ಗುರಿಪಳ್ಳ: ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ಪದಾಧಿಕಾರಿಗಳ ಸಭೆ ಜೂ.16ರಂದು ಭಜನಾ ಮಂದಿರದ ಅಧ್ಯಕ್ಷೆ ಬೇಬಿ ಉಮೇಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನೂತನ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಗೌಡ, ಗೌರವಾಧ್ಯಕ್ಷರಾಗಿ ಬೇಬಿ ಉಮೇಶ್, ಉಪಾಧ್ಯಕ್ಷರಾಗಿ ಗೀತಾ ವಿ ನಾಯ್ಕ, ಪ್ರ.ಕಾರ್ಯದರ್ಶಿಯಾಗಿ ಮಮತಾ ಸುಭಾಷ್, ಕೋಶಾಧಿಕಾರಿಯಾಗಿ ಸಂತೋಷ್ ಗೌಡ ಗೋಳಿದೊಟ್ಟು, ಜೊತೆ ಕಾರ್ಯದರ್ಶಿಯಾಗಿ ಶರ್ಮಿತ್ ಇವರನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಗೌರವ ಸಲಹೆಗಾರರಾಗಿ ಸುಂದರ ಪೂಜಾರಿ ಗುರಿಪಳ್ಳ, ಯಶೋಧರ ಗೌಡ ಕೊಡ್ಡೋಲು, ಪ್ರಸಾದ್ ಕುಮಾರ್‌ ಏಣೀರು, ರಘುನಾಥ್ ಜಯನಗರ ಇವರು ಆಯ್ಕೆಯಾದರು.

Exit mobile version