Site icon Suddi Belthangady

ಬೆಳ್ತಂಗಡಿ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಸಹಾಯ ಧನ ಹಸ್ತಾಂತರ

ಕೊಕ್ಕಡ: ಬೆಳ್ತಂಗಡಿ ವಲಯದ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಕೊಕ್ಕಡ ಶ್ರೀ ವಿನಾಯಕ ಮೋಟಾರ್ ವರ್ಕ್ ಶಾಪ್‌ನ ಮಾಲಕ ತಿಮ್ಮಪ್ಪ ಗೌಡ ಇವರು ಅನಾರೋಗ್ಯದಿಂದ ಇರುವ ಕಾರಣ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು.

ಬೆಳ್ತಂಗಡಿ ವಲಯದ ಅಧ್ಯಕ್ಷ ವಿ.ಎನ್.ಬಾಬುರಾಜ್ ಕಕ್ಕಿಂಜೆ, ಕಾರ್ಯದರ್ಶಿಗಳಾದ ಪುರಂದರ ಹೆಗ್ಡೆ ಬೆಳ್ತಂಗಡಿ, ಸಂಚಾಲಕ ಬಾಲಕೃಷ್ಣ ಶೆಟ್ಟಿ ಉಜಿರೆ, ಉಪಾಧ್ಯಕ್ಷರುಗಳಾದ ಮಂಜುನಾಥ ಪಟ್ರಮೆ, ಆನಂದ ಪೂಜಾರಿ ಬೆಳ್ತಂಗಡಿ, ಪ್ರಕಾಶ್ ಮುತ್ತಪ್ಪ ಗ್ಯಾರೇಜು ಕಲ್ಲೇರಿ ಇವರ ಉಪಸ್ಥಿತಿಯಲ್ಲಿ ಮತ್ತು ಕೊಕ್ಕಡ ಪರಿಸರದ ಕಾರ್ಯಕಾರಿಣಿ ಸದಸ್ಯರಾದ ಶಾಂತಕುಮಾರ್ ಇವರ ಸಹಕಾರದೊಂದಿಗೆ ಮತ್ತು ಕೊಕ್ಕಡ ಪರಿಸರದ ಗ್ಯಾರೇಜು ಮಾಲಕರಾದ ಪರಮೇಶ್ವರ ಗೌಡ, ಲಕ್ಷ್ಮಣ್, ಅನೀಶ್, ಜಗದೀಶ್, ಪ್ರಶಾಂತ್, ಹರೀಶ್, ಜಿತೇಶ್ ಮತ್ತು ಇನ್ನಿತರ ಗ್ಯಾರೇಜು ಮಾಲಕರ ಸಹಕಾರದೊಂದಿಗೆ ತಿಮ್ಮಪ್ಪ ಗೌಡರಿಗೆ ಪರಿಹಾರ ನಿಧಿಯನ್ನು ನೀಡಲಾಯಿತು.

Exit mobile version