Site icon Suddi Belthangady

ಬೆಳ್ತಂಗಡಿ: ದಲಿತ ಮುಖಂಡ, ತಾ.ಪಂ ಮಾಜಿ ಸದಸ್ಯ ಚಂದು ಎಲ್‌. ನಿಧನ

ಬೆಳ್ತಂಗಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ರಾಜ್ಯ ಸಂಘಟನಾ ಸಂಚಾಲಕ, ಹಾಗೂ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ, ಲಾಯಿಲ ಗ್ರಾಮದ ನಿನ್ನಿಕಲ್ ನಿವಾಸಿ ಚಂದು ಎಲ್. ರವರು ಅನಾರೋಗ್ಯದಿಂದ ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಜೂ.19ರಂದು ನಿಧನರಾದರು.

ಇವರು ದಲಿತ ವಿವಿಧ ಸಂಘಟನೆಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Exit mobile version