Site icon Suddi Belthangady

ಉಪನ್ಯಾಸಕಿ ಮಹಿತಾ ಕುಮಾರಿಗೆ ಡಾಕ್ಟರೇಟ್ ಪದವಿ

ಬೆಳ್ತಂಗಡಿ: ಗುರುವಾಯನಕೆರೆ ವಿದ್ವತ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಮಹಿತಾ ಕುಮಾರಿ ಎಂ ರವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜೂ.15ರಂದು ನಡೆದ 42ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಫ್ರೋ| ಶ್ರೀಪತಿ ಕಲ್ಲೂರಾಯ ಮಾರ್ಗದರ್ಶನದಲ್ಲಿ “Consumption Expenditure, Savings and Investment Behaviour of Working Women:A Study in Dakshina Kannada” ಎಂಬ ಮಹಾಪ್ರಬಂಧ ಮಂಡಿಸಿದ್ದರು.

ತೆಂಕಕಾರಂದೂರು ಗ್ರಾಮದ ಮಂಜುನಾಥ ಗೌಡ ಹಾಗೂ ರತ್ನಮ್ಮ ದಂಪತಿ ಸುಪುತ್ರಿಯಾಗಿದ್ದು, ಒಡಿಲ್ನಾಳ ಗ್ರಾಮದ ಸಂಬೊಳ್ಯದ ಉಪನ್ಯಾಸಕ ಡಾ.ಪುರಂದರ ಹೆಚ್‌ರವರ ಧರ್ಮಪತ್ನಿ ಸಂಬೊಳ್ಯದಲ್ಲಿ ಪುತ್ರಿ ಮನಸ್ವಿಯೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.

Exit mobile version