Site icon Suddi Belthangady

ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಮೈಕ್ರೋ ಬಚತ್ ಪಾಲಿಸಿಯ ಪರಿಹಾರ ಚೆಕ್ ವಿತರಣೆ

ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಯಾ ಒಕ್ಕೂಟದ ಮಹಾದೇವ ಪ್ರಗತಿಬಂಧು ಸಂಘದ ಸದಸ್ಯ ತಮ್ಮಯ್ಯ ರವರು ಸಂಘದಲ್ಲಿ ಇಂದಿನ ಉಳಿತಾಯ ನಾಳೆಯ ಸುರಕ್ಷೆಗಾಗಿ ಸೇವಾಪ್ರತಿನಿಧಿಯವರ ಮಾಹಿತಿಯಂತೆ ಎಲ್ಐಸಿ ಯ ಮೈಕ್ರೋ ಬಚತ್ ಪಾಲಿಸಿಯನ್ನು ನೋಂದಾವಣೆ ಮಾಡಿಕೊಂಡಿರುತ್ತಾರೆ.

ಸದ್ರಿ ತಮ್ಮಯ್ಯರವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮರಣ ಹೊಂದಿರುತ್ತಾರೆ.ಬಡ ಕುಟುಂಬದವರಾಗಿದ್ದು ಹೆಂಡತಿ, 3 ಮಕ್ಕಳನ್ನು ಅಗಲಿರುತ್ತಾರೆ.ತನ್ನ ಸುರಕ್ಷೆಗಾಗಿ ಮಾಡಿದ ರೂ.2 ಲಕ್ಷದ ಮೈಕ್ರೋ ಬಚತ್ ಪಾಲಿಸಿಯಲ್ಲಿ ಮರಣ ಸಾಂತ್ವನ ಮೊತ್ತ 2,00,000/- ಸದ್ರಿ ಕುಟುಂಬಕ್ಕೆ ಮಂಜೂರಾಗಿದ್ದು ಸದ್ರಿ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಸುರೇಂದ್ರ, ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲ್ಯಾನ್, ಮಾಜಿ ಅಧ್ಯಕ್ಷ ಶಿವಪ್ಪ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಜೊತೆ ಕಾರ್ಯದರ್ಶಿ ಗೀತಾ, ಯಶೋಧರ ಅಂಬ್ಯ, ಮಹಾದೇವ ಸಂಘದ ಸದಸ್ಯರಾದ ರಾಮಚಂದ್ರ, ಶಿನಪ್ಪ ಗೌಡ, ಕೊರಗಪ್ಪ ಗೌಡ ಮತ್ತು ವಲಯ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿಧಿ ಪ್ರಭಾ ಉಪಸ್ಥಿತರಿದ್ದರು.

Exit mobile version