Site icon Suddi Belthangady

ಬೆಳ್ತಂಗಡಿ: ಬೀಡಿ ಗುತ್ತಿಗೆ ಕೆಲಸ ಮಾಡುವವರ ಸಂಘ ನೂತನ ಅಧ್ಯಕ್ಷರಾಗಿ ಸಿ.ಮಹಮ್ಮದ್ ಕಕ್ಕಿಂಜೆ, ಕಾರ್ಯದರ್ಶಿ ರಫಾಯಲ್ ವೇಗಸ್, ಖಜಾಂಜಿಯಾಗಿ ರಾಮಯ್ಯ ಮಾಚಾರು ಆಯ್ಕೆ

ಬೆಳ್ತಂಗಡಿ: ಬೀಡಿ ಗುತ್ತಿಗೆ ಕೆಲಸ ಮಾಡುವವರ ಸಂಘದ 5ನೇ ಮಹಾ ಸಭೆಯು ಇತ್ತೀಚೆಗೆ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಮಹಾಸಭೆಯಲ್ಲಿ ಬೀಡಿ ಉದ್ಯಮದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಾಲಕರಿಗೆ ಮನವಿ ನೀಡಲು ತೀರ್ಮಾನಿಸಲಾಯಿತು. 2024-25ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಸಿ.ಮಹಮ್ಮದ್ ಕಕ್ಕಿಂಜೆ ಮರು ಆಯ್ಕೆಯಾದರು ಗೌರವಾಧ್ಯಕ್ಷರಾಗಿ ಕಕ್ಕನಾಜೆ ಶಿವಾನಂದ ರಾವ್, ಕಾರ್ಯದರ್ಶಿಯಾಗಿ ರಫಾಯಲ್ ವೇಗಸ್, ಖಜಾಂಜಿಯಾಗಿ ರಾಮಯ್ಯ ಗೌಡ ಮಾಚಾರು, ಉಪಾಧ್ಯಕ್ಷರುಗಳಾಗಿ ಸಯ್ಯದ್ ಹುಸೇನ್ ಕೋಯ, ಸಯ್ಯದ್ ಹಬೀಬ್ ಸಾಹೇಬ್, ಜಗನ್ನಾಥ ಶೆಟ್ಟಿ ಅಳದಂಗಡಿ, ನಜೀರ್ ಸಾಹೇಬ್, ಸಹ ಕಾರ್ಯದರ್ಶಿಗಳಾಗಿ ಡಿ.ಎಚ್.ಇಬ್ರಾಹಿಂ, ಕಮಲಾಕ್ಷ ಪೂಜಾರಿ, ಹಿದಾಯತ್, ಹಾಗೂ ಸಮಿತಿಯ ಸದಸ್ಯರಾಗಿ ಜನಾರ್ಧನ ದಾಸ್, ಸಲೀಂ ಮಾಚಾರು, ಆನಂದ ಪೂಜಾರಿ, ತುಂಗಪ್ಪ ಬಂಗೇರ, ಉಮರ್ ಜಾರಿಗೆ ಬೈಲು, ಮೊಯಿದ್ದೀನ್ ಉಜಿರೆ, ಅರುಣ ಬೆಳ್ತಂಗಡಿ, ಎಚ್.ಉಮರ್ ಆಯ್ಕೆಯಾದರು.

Exit mobile version