Site icon Suddi Belthangady

ತಣ್ಣೀರುಪಂತ: ಪ್ಯಾಕ್ಸ್ ಅಧ್ಯಕ್ಷರಾಗಿ ಜಗದೀಶ್ ಶೆಟ್ಟಿ ಮೈರ ಕರಾಯ ಆಯ್ಕೆ

ತಣ್ಣೀರುಪಂತ: ತಣ್ಣೀರುಪತಂತ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ ಜಗದೀಶ್ ರವರು 1 ವರ್ಷಗಳ ಕಾಲಾವಧಿವರೆಗೆ ಆಯ್ಕೆಯಾಗಿದ್ದಾರೆ.ಜಯವಿಕ್ರಮ್ ಕಲ್ಲಾಪು ಪರಭಾವಗೊಂಡಿದ್ದಾರೆ.

ನಿರಂಜನ್ ಬಾವಂತಬೆಟ್ಟು ರವರ ನಿಧನ ಬಳಿಕ, ಹಾಂಗಾಮಿ ಅಧ್ಯಕ್ಷರಾಗಿ ತಾಜುದ್ದೀನ್ ಅವರು ಕಾರ್ಯನಿರ್ವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನವಾಣೆಯಲ್ಲಿ ಭಾಜಪಾ ಬೆಂಬಲಿತ ಜಗದೀಶ್ ಶೆಟ್ಟಿ ಮೈರ ಕರಾಯ 7 ಮತ ಪಡೆದು ಜಯಬೇರಿಯಾಗಿ ಪ್ರಥಮ ಬಾರಿಗೆ ಭಾಜಪ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಜಯವಿಕ್ರಮ್ ಕಲ್ಲಾಪು 5 ಮತ ಪಡೆದು ಪರಭಾವಗೊಂಡಿದ್ದಾರೆ. ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಜೂ.19ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಕರಾಯ ಶ್ರೀಕೃಷ್ಣ ಭಜನಾ ಮಂದಿರ ಅಧ್ಯಕ್ಷರಾಗಿದ್ದಾರೆ.ಹಾಗೂ ಕರಾಯ ಮಹಾಲಿಂಗೇಶ್ವರ ದೇವಸ್ಥಾನದ ಆಡಲಿತ ಸಮಿತಿಯ ಸದಸ್ಯರಾಗಿದ್ದರು.

Exit mobile version