Site icon Suddi Belthangady

ಗುರಿಪಳ್ಳದಲ್ಲಿ ಚರಂಡಿಗೆ ಬಿದ್ದ ಕೆ.ಎಸ್.ಆರ್.ಟಿ.ಸಿ ಬಸ್

ಉಜಿರೆ: ಉಜಿರೆ – ಗುರಿಪಳ್ಳ ರಸ್ತೆ ಕಿರಿದಾಗಿದ್ದು ಪ್ರತಿದಿನ ಬಸ್ ಗಳು ಹರಸಾಹಸ ಪಟ್ಟು ಹೋಗುವ ಪರಿಸ್ಥಿತಿ ಎದುರಾಗಿದೆ.ಕೆ.ಎಸ್.ಆರ್.ಟಿ.ಸಿ ಬಸ್ ಆಟೋ ರಿಕ್ಷಾಕ್ಕೆ ಸೈಡ್ ಬಿಟ್ಟು ಕೊಡಲು ಹೋಗುವಾಗ ಬಸ್ ಚರಂಡಿಗೆ ಬಿದ್ದ ಘಟನೆ ಇಂದು (ಜೂ.19) ಬೆಳಿಗ್ಗೆ ನಡೆದಿದೆ.

ಈ ರಸ್ತೆಯು ಪಿಡಬ್ಲ್ಯೂಡಿಗೆ ಹಸ್ತಾಂತರಗೊಂಡಿದ್ದರು ಸಾವಿರಾರು ವಾಹನಗಳು ಉಜಿರೆ-ಇಂದಬೆಟ್ಟುವಿಗೆ ಹೋಗಲು ಇದೆ ರಸ್ತೆ ಬಳಸುತ್ತಿದ್ದಾರೆ.

ಕೂಡಲೇ ಇಲಾಖೆಯವರು ಕಾಳಜಿ ವಹಿಸಿ ರಸ್ತೆ ಅಗಲೀಕರಣ ನಡೆಸಬೇಕು ಎಂದು ಊರವರು ಒತ್ತಾಯಿಸಿದ್ದಾರೆ.

Exit mobile version