Site icon Suddi Belthangady

ಎಲ್.ಡಿ ಬ್ಯಾಂಕ್‌ಗೆ ಸಂಜೀವ ಪೂಜಾರಿ ನಾಮನಿರ್ದೇಶನ

ಬೆಳ್ತಂಗಡಿ: ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಗೆ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಕಾರಂದೂರು ಗ್ರಾಮದ ಕೆ.ಸಂಜೀವ ಪೂಜಾರಿ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.

ಸಚಿವ ದಿನೇಶ್ ಗುಂಡೂರಾವ್ ಅವರು ಕೆ.ಸಂಜೀವ ಪೂಜಾರಿ ಇವರನ್ನು ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಭೂ ಅಭಿವೃದ್ಧಿ (ಎಲ್‌ಡಿ) ಬ್ಯಾಂಕಿನ ಆಡಳಿತ ಮಂಡಳಿಗೆ ನಾಮನಿರ್ದೇಶಿತ ಸದಸ್ಯನ್ನಾಗಿ ನೇಮಕ ಮಾಡುವಂತೆ ಕೋರಿ ಸಹಕಾರ ಸಚಿವರಿಗೆ ಮನವಿ ಪತ್ರ ವರ್ಗಾಯಿಸಿದ್ದಾರೆ.

ತಮ್ಮ ಬ್ಯಾಂಕಿನ ಆಡಳಿತ ಮಂಡಳಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲು ಕೆ.ಸಂಜೀವ ಪೂಜಾರಿ, ಇವರನ್ನು ನೇಮಕ ಮಾಡಲು ಸದ್ರಿಯವರ ಭಾವಚಿತ್ರದೊಂದಿಗೆ ವ್ಯಕ್ತಿಗತ ವಿವರ, ನಮೂನೆ, 1 ಮತ್ತು 2ರಲ್ಲಿ ಮಾಹಿತಿ, ಸಂಘದ ಕಾರ್ಯವ್ಯಾಪ್ತಿ ಹಾಗೂ ಆಡಳಿತ ಮಂಡಳಿ ರಚನೆ ಬಗ್ಗೆ ದೃಢೀಕೃತ ಬೈಲಾ ಪ್ರತಿ ಹಾಗೂ ಚುನಾವಣಾ ಫಲಿತಾಂಶ ಘೋಷಣಾ ಪ್ರತಿ ಮತ್ತು ಸರ್ಕಾರ ಆರ್ಥಿಕ ನೆರವಿನ ವಿವರಗಳನ್ನು ನಿಗದಿತ ನಮೂನೆಯಲ್ಲಿ ದೃಢೀಕೃತ ಪ್ರತಿಗಳನ್ನು ದ್ವಿ ಪ್ರತಿಗಳಲ್ಲಿ ಸಲ್ಲಿಸಲು ಸೂಚಿಸಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

Exit mobile version