Site icon Suddi Belthangady

ಹಿರಿಯ ಪತ್ರಕರ್ತ ವಿನಯ್ ಕುಮಾರ್ ಸೇಮಿತರಿಗೆ ಪತ್ರಕರ್ತ ಸಂಘದಿಂದ ನುಡಿ ನಮನ

ಬೆಳ್ತಂಗಡಿ: ಕರಿಮಣೇಲು ಮಾಗಣೆಗುತ್ತು ನಿವಾಸಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಿರಿಯ ಪತ್ರಕರ್ತ ವಿನಯ್ ಕುಮಾರ್ ಸೇಮಿತರಿಗೆ ತಾಲೂಕು ಪತ್ರಕರ್ತ ಸಂಘದ ವತಿಯಿಂದ ಜೂ.15ರಂದು ಪತ್ರಿಕಾ ಭವನದಲ್ಲಿ ನುಡಿ ನಮನ ಸಲ್ಲಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ಹಿರಿಯ ಪತ್ರಕರ್ತರಾದ ಆರ್.ಎನ್.ಪೂವಣಿ, ಮಂಜುನಾಥ ರೈ, ಆಚುಶ್ರೀ ಬಾಂಗೇರು ನುಡಿ ನಮನ ಸಲ್ಲಿಸಿದರು.

ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ಮನೋಹರ ಬಳಂಜ, ಸದಸ್ಯರಾದ ಜಾರಪ್ಪ ಪೂಜಾರಿ ಬೆಳಾಲು, ಪ್ರಸಾದ್ ಶೆಟ್ಟಿ, ತುಕಾರಾಮ್ ಬಿ.ಸಂತೋಷ ಪಿ. ಕೋಟ್ಯಾನ್ ಬಳಂಜ ಹಾಜರಿದ್ದರು.

Exit mobile version