Site icon Suddi Belthangady

ಧರ್ಮಸ್ಥಳ: ಬೆಳ್ತಂಗಡಿ ರೋಟರಿ ಕ್ಲಬ್ ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ಧರ್ಮಸ್ಥಳ: ಬೆಳ್ತಂಗಡಿ ರೋಟರಿ ಕ್ಲಬ್ ಇವರ ನೇತೃತ್ವದಲ್ಲಿ ಬೆಳ್ತಂಗಡಿ ವೀರಕೇಸರಿ, ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಎಜೆ ಬ್ಲಡ್ ಸೆಂಟರ್ ಮತ್ತು ಎಜೆ ಹಾಸ್ಪಿಟಲ್ ಹಾಗೂ ರಿಸರ್ಚ್ ಸೆಂಟರ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಸೇವಾ ಭಾರತಿ ಕನ್ಯಾಡಿ ಇವರ ಸಂಯೋಜನೆಯಲ್ಲಿ ಜೂ.14ರಂದು ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರವು ಧರ್ಮಸ್ಥಳದ ಅಟಲ್ ಜಿ ಸಭಾಭವನ ಕಲ್ಲೇರಿಯಲ್ಲಿ ಜರಗಿತು.

ರೋಟರಿ ಕ್ಲಬ್ ಬೆಳ್ತಂಗಡಿ ಇದರ ನಿಯೋಜಿತ ಅಧ್ಯಕ್ಷ ಪೂರನ್ ವರ್ಮ ಕಾರ್ಯಕ್ರಮ ಉದ್ಘಾಟಿಸಿ, ಧರ್ಮಸ್ಥಳ ಪ್ಯಾಕ್ಸ್ ಅಧ್ಯಕ್ಷ ಪ್ರೀತಮ್ ಡಿ. ಧರ್ಮಸ್ಥಳ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳದ ‘ಅನ್ನಪೂರ್ಣ’ದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್ ವೀರಕೇಸರಿ ಸದಸ್ಯ ಸುಧಾಕರ ಧರ್ಮಸ್ಥಳ, ಸೇವಾ ಭಾರತಿಯ ಸಲಹಾ ಮಂಡಳಿ ಸದಸ್ಯ ರಜತ್ ರಾವ್, ಪ್ರಾಧ್ಯಾಪಕ ಡಾ.ಅರವಿಂದ ಪಿ ಹಾಗೂ ಶ್ರೀಧರ್ ಕೆ.ವಿ. ಉಪಸ್ಥಿತರಿದ್ದರು.

Exit mobile version