Site icon Suddi Belthangady

ಶಿಬರಾಜೆ: ಅರಣ್ಯ ಇಲಾಖೆ ವತಿಯಿಂದ ವಿವಿಧ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ

ಕಳೆಂಜ: ಕಳೆಂಜ ಗ್ರಾಮದ ಮಿಯಾರು ಮೀಸಲು ರಕ್ಷಿತ ಅರಣ್ಯದ, ಪಾದೆ ಎಂಬಲ್ಲಿ ಅರಣ್ಯ ಇಲಾಖೆ ವತಿಯಿಂದ ವಿವಿಧ ಹಣ್ಣಿನ ಗಿಡಗಳನ್ನು ನೇಡುವ ಮೂಲಕ ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಗೌಡ ಹಾರಿತ್ತಕಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ, ಉಪ್ಪಿನಂಗಡಿ ಉಪ ವಲಯ ಅರಣ್ಯಧಿಕಾರಿ ಪ್ರಶಾಂತ್ ಪೂಜಾರಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಶ್ರೀಧರ್ ಉದ್ರಜೆ, ಕಪಿಲಾ JCI ನ ಅಧ್ಯಕ್ಷ ಸಂತೋಷ್ ಜೈನ್ ವಳಂಬಲ, ಕಾರ್ಯದರ್ಶಿ ಅಕ್ಷತ್ ರೈ ಗುತ್ತಿಮಾರ್, ಕಳೆಂಜ ದೇವಾಸ್ಥನ ಅಧ್ಯಕ್ಷ ಶ್ರೀಧರ್ ರಾವ್ ಕಾಯಡ, ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಮತ್ತು ಅರಣ್ಯ ಸಮಿತಿ ಸದಸ್ಯರಾದ ಪುಷ್ಪ ಬೊಟ್ಟು, ಗಿರಿಜ ಎಂ ಕೆ, ನಿಡ್ದಾಜೆ, ಸುಶೀಲಾ ಎಂ ಕೆ ಮುಡ್ಯಲಗುರಿ, ಪಾರ್ವತಿ ನಾಯ್ಕ ಕುಕ್ಕಜೆ, ಅರಣ್ಯ ವೀಕ್ಷಕ ವಿನಯ್ ವಳಗುಡ್ಡೆ ಉಪಸ್ಥಿತರಿದ್ದರು.

Exit mobile version