Site icon Suddi Belthangady

ನೆರಿಯ: ಸಂತ ಥೋಮಸ್ ಅನುದಾನಿತ ಪ್ರೌಢಶಾಲೆಯಲ್ಲಿ ಶೇ.100 ಫಲಿತಾಂಶದ ಸಾಧನೆಗೆ ಕಾರಣಕರ್ತರಾದ ಶಿಕ್ಷಕ ವೃಂದಕ್ಕೆ ಸನ್ಮಾನ

ನೆರಿಯ: ಸಂತ ಥೋಮಸ್ ಅನುದಾನಿತ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಪಡೆದು ಉತ್ತಮ ಫಲಿತಾಂಶಕ್ಕೆ ಕಾರಣವಾದ ಶಿಕ್ಷಕ ವೃಂದಕ್ಕೆ ಕರ್ನಾಟಕ ಕ್ಯಾಥೋಲಿಕ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಸೊಸೈಟಿ, ಬೆಳ್ತಂಗಡಿ ಧರ್ಮಪ್ರಾಂತ್ಯ ಇದರ ಆಶ್ರಯದಲ್ಲಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಗ್ರಾಮೀಣ ಮತ್ತು ಅತಿ ಹಿಂದುಳಿದ ಪ್ರದೇಶಗಳಲ್ಲಿ ಮತ್ತು ದಿನಗೂಲಿ ಹಾಗೂ ಹಿಂದುಳಿದ ಕೃಷಿ ಕಾರ್ಮಿಕರ ಮಕ್ಕಳನ್ನು ಉತ್ತಮ ಶಿಕ್ಷಣದ ಮುಕಾಂತರ ಅವರ ಬದುಕನ್ನು ರೂಪಿಸುವ ಶಿಕ್ಷಕರ ಪ್ರಯತ್ನವನ್ನು ಮುಕ್ತ ಕಂಠದಿಂದ ಕೆ ಸಿ ಇ ಸಿ ಸೊಸೈಟಿ ಯ ನಿರ್ದೇಶಕ ವಂದನಿಯ ಶಾಜಿ ಮಾತ್ಯು ಪ್ರಶಂಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರು ಸಂತ ಥೋಮಸ್ ಚರ್ಚ್ ಗಂಡಿಬಾಗಿಲು ಇದರ ಧರ್ಮ ಗುರು ಆದ ವಂದನಿಯ ಫಾ.ಜೋಸ್ ಮುಖ್ಯ ಶಿಕ್ಷಕಿ ತ್ರೆಸ್ಯ ಮೊದಲಾದವರು ಉಪಸ್ಥಿತರಿದ್ದರು.

Exit mobile version