Site icon Suddi Belthangady

ಪದ್ಮುಂಜ: ಬಟ್ಟೆಯಂಗಡಿ ನಡೆಸುತ್ತಿದ್ದ ನಿರ್ಮಲ ಹೃದಯಾಘಾತದಿದ ಸಾವು

ಪದ್ಮುಂಜ: ಇಲ್ಲಿಯ ಕೆನರಾ ಬ್ಯಾಂಕ್ ನ ಕೆಳಗಡೆ ಕೊಲ್ಲಾಜೆ ಕಾಂಪ್ಲೆಕ್ಸ್ ನಲ್ಲಿ ತನ್ನ ಗಂಡ ಸುರೇಶ್ ಗೌಡನೊಂದಿಗೆ ಬಟ್ಟೆಯಂಗಡಿ ಇಟ್ಟು ಟೈಲರ್ ವೃತ್ತಿ ನಡೆಸುತ್ತಿದ್ದ ನಿರ್ಮಲ(41ವ) ರವರು ಜೂ.12ರಂದು ಬೆಳಗ್ಗೆ ಹೃದಯಘಾತದಿದ ನಿಧನ ಹೊಂದಿದ್ದಾರೆ.

ಗಂಡ ಸುರೇಶ್ ಗೌಡ ರವರು ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಲಗಿದ್ದಲ್ಲಿಂದ ಎಬ್ಬಿಸುವಾಗ ಇವರ ಆರೋಗ್ಯದಲ್ಲಿ ಅಸ್ತವ್ಯಸ್ತ ಕಂಡ ಕಾರಣ ಕೂಡಲೇ 108 ಆಂಬುಲೆನ್ಸ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದೂ, ನಿಧನರಾದಗಿದ್ದಾರೆಂದು ದೃಢಪಡಿಸಿದ್ದಾರೆ.

ಮೃತರು ಗಂಡ ಸುರೇಶ್ ಗೌಡ, ಮೂರು ಹೆಣ್ಣು ಮಕ್ಕಳಾದ ಜ್ಞಾನಶ್ರೀ, ಪ್ರಾರ್ಥನ, ವೇದಿಕ ಹಾಗೂ ಬಂಧು-ವರ್ಗವನ್ನು ಅಗಲಿದ್ದಾರೆ.

Exit mobile version