Site icon Suddi Belthangady

ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸತ್ತಿಗಾಗಿ ಚುನಾವಣೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿಗಾಗಿ ಚುನಾವಣೆ ನಡೆಸಲಾಯಿತು.

ಚುನಾವಣೆಯ ವಿವಿಧ ಹಂತಗಳಾದ ನಾಮಪತ್ರ ಸಲ್ಲಿಕೆ ನಾಮಪತ್ರ ಹಿಂಪಡೆಯುವಿಕೆ ನಾಮಪತ್ರ ಪರಿಶೀಲಿಸುವಿಕೆ ಇತ್ಯಾದಿಗಳು ಕ್ರಮ ಪ್ರಕಾರವಾಗಿ ನಡೆದು ಬಳಿಕ ಚುನಾವಣೆಯನ್ನು ನಡೆಸಲಾಯಿತು.

ಈ ಬಾರಿಯ ಮತದಾನಕ್ಕಾಗಿ ಇವಿಯಂ ಮತ ಯಂತ್ರ ಬಳಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಹಾಗೂ ಅದರ ವಿವಿಧ ಹಂತಗಳನ್ನು ತಿಳಿಯಲು ಈ ಮೂಲಕ ಸಹಾಯವಾಯಿತು.

ಶಾಲಾ ನಾಯಕನಾಗಿ 10ನೇ ತರಗತಿ ಸುಧಾಮ ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಚಂದನ, ಆಟೋಟ ಮುಖ್ಯಮಂತ್ರಿಯಾಗಿ 10ನೇ ತರಗತಿಯ ಸಮೀಕ್ಷಾ ನೀರಾವರಿ ಮಂತ್ರಿಯಾಗಿ 8ನೇ ತರಗತಿಯ ಅನುಜ್ಞಾ, ಶೈಕ್ಷಣಿಕ ಮಂತ್ರಿಯಾಗಿ ಜ್ಯೇಷ್ಠ ಶರ್ಮಾ, ಶಿಸ್ತುಪಾಲನಾ ಮಂತ್ರಿಯಾಗಿ 9ನೇ ತರಗತಿಯ ಆದರ್ಶ ಎಚ್.ವೈ, ಆರೋಗ್ಯ ಮಂತ್ರಿಯಾಗಿ 9ನೇ ತರಗತಿಯ ಕ್ಷಿತಿಷ್ ಆಯ್ಕೆಯಾದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿರೋಧ ಪಕ್ಷದ ವಿದ್ಯಾರ್ಥಿಗಳಿಗೆ ಆಡಳಿತ ಪಕ್ಷದ ಮೇಲೆ ಕಣ್ಗಾವಲಿಟ್ಟು ಶಾಲಾ ಯಶಸ್ಸಿಗೆ ಸಹಕರಿಸಲು ತಿಳಿಸಿದರು.ಶಾಲಾ ಶಿಕ್ಷಕರುಗಳು ಚುನಾವಣೆಗೆ ಸಹಕರಿಸಿದರು.

Exit mobile version