Site icon Suddi Belthangady

ನರೇಂದ್ರ ಮೋದಿಯವರ ಪ್ರಮಾಣವಚನ ಹಿನ್ನೆಲೆ ಇಂದಬೆಟ್ಟುವಿನಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ

ಇಂದಬೆಟ್ಟು: ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಇಂದಬೆಟ್ಟು ಬಿಜೆಪಿ ಕಾರ್ಯಕರ್ತರು ಸುಡುಮದ್ದು ಪ್ರದರ್ಶನ, ಡಿಜೆ ಧ್ವನಿವರ್ಧಕ, ಸಿಹಿತಿನಿಸು ವಿತರಿಸುವ ಮೂಲಕ ಸಂಭ್ರಮ ಆಚರಣೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್ ಇಂದಬೆಟ್ಟು, ಪಂಚಾಯತ್ ಅಧ್ಯಕ್ಷೆ ಆಶಾಲತಾ, ಸದಸ್ಯರಾದ ಪ್ರಮೋದ್ ಕುಮಾರ್, ಸುಮಿತ್ರಾ, ಬೂತ್ ಅಧ್ಯಕ್ಷ , ಕಾರ್ಯದರ್ಶಿ ಸಂಜೀವ ಗೌಡ, ನಿತೇಶ್ ಕಡಿತ್ಯಾರು, ರಕ್ಷಿತ್ ಮೊಯ್ಲಿ, ಸಚಿನ್ ಬಂಗಾಡಿ, ಪ್ರತೀಶ್ ಕಡಿತ್ಯಾರು, ಪಿ.ಎಡಿ.ಬ್ಯಾಂಕ್ ಉಪಾಧ್ಯಕ್ಷ ವಾಮನ ಗೌಡ, ರೈತ ಮೋರ್ಚಾ ಉಪಾಧ್ಯಕ್ಷ ಪಳನಿ ಸ್ವಾಮಿ, ಯುವ ಮೋರ್ಚಾ ಸಂಚಾಲಕ ಸಂತೋಷ್ ಕುಮಾರ್ ಉಂಬೆಜೆ, ಚಂದ್ರಶೇಖರ ಪಡೆಂಕ್ಕಲ್, ಸುರಪ್ಪ ಅಂತರದಡ್ಡು, ಪಕ್ಷದ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವವರು ಪ್ರಮುಖರು, ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version