Site icon Suddi Belthangady

ಉಜಿರೆ ವಿಶಾಲ್ ಸೇವಾ ಟ್ರಸ್ಟ್ ನಿಂದ ಮಕ್ಕಳಿಗೆ ಪುಸ್ತಕ ವಿತರಣೆ

ಉಜಿರೆ: ಉಜಿರೆ ನಿತ್ಯಾಧರ್ ವಾಳೆಯ ವಲೇರಿಯನ್ ಡಿ’ಸೋಜಾ ರವರ ಪುತ್ರ ವಿಶಾಲ್ ಡಿ’ಸೋಜಾ ಹೆಸರಿನಲ್ಲಿ ಪ್ರಾರಂಭಿಸಿದ ವಿಶಾಲ್ ಸೇವಾ ಟ್ರಸ್ಟ್ ನಿಂದ ಬಡ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಜೂ.9ರಂದು ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಜರಗಿತು.

ಚರ್ಚ್ ಧರ್ಮಗುರು ವಂ. ಫಾ.ಅಬೆಲ್ ಲೋಬೊ ಬಡ ಮಕ್ಕಳಿಗೆ ಪುಸ್ತಕ ವಿತರಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿಯಾ ಸಂಚಾಲಕ ವಲೇರಿಯನ್ ಡಿಸೋಜಾ ಕುಟುಂಬ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Exit mobile version