Site icon Suddi Belthangady

ಕುಕ್ಕಾವಿನಲ್ಲಿ ಡೆತ್ ನೋಟ್ ಬರೆದಿಟ್ಟು ಕಾಣೆಯಾದ ಬಾಣಂತಿ ಕಾಡಿನಲ್ಲಿ ಪತ್ತೆ- ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ- ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನೆ

ಕಡಿರುದ್ಯಾವರ: ಮಾನಸಿಕ ಕಿರುಕುಳಕ್ಕೆ ಮನನೊಂದು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಕುಕ್ಕಾವಿನ ಪುಟ್ಟ ಮಗುವಿನ ತಾಯಿ ಭವ್ಯ ಇಂದು ಜೂ.08ರಂದು ಬೆಳಗ್ಗೆ ಪತ್ತೆಯಾಗಿದ್ದಾರೆ.ಕಡಿರುದ್ಯಾವರ ಗ್ರಾಮದ ನೆರೊಲ್ದಡಿಯ ಗಣೇಶ್ ದೇವಾಡಿಗರ ಪತ್ನಿ ಭವ್ಯ ಇವರು ಡೆತ್ ನೋಟ್ ಬರೆದಿಟ್ಟು ಜೂ 07ರಂದು ನಾಪತ್ತೆಯಾಗಿದ್ದರು.

ಜೂನ್ 7ರಂದು ಬೆಳಗ್ಗೆ 10ರಿಂದ ಭವ್ಯರ ಹುಡುಕಾಟ ಸಾಗಿತ್ತು.ಇಂದು ಬೆಳಗ್ಗೆ ಭವ್ಯಾರವರು ಬಂಡಾಜೆ ಕಾಡಿನಲ್ಲಿ ಪತ್ತೆಯಾಗಿದ್ದಾರೆ. ಪತಿ ಪೋನ್ ಕರೆ ಮಾಡಿದಾಗ ಸ್ವೀಕರಿಸಿದ್ದು ನಂತರ ಹುಡುಕಾಟ ನಡೆಸಿದ್ದಾರೆ.

ಭವ್ಯರವರು ಕಾಡಿನಲ್ಲಿ ಬಿದ್ದು ಗಾಯಗಳಾಗಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ಸಾಧ್ಯತೆಯಿದೆ.

Exit mobile version